*ಬಸವ ಜಯಂತಿ ಸಂಭ್ರಮ:*
*ಸರಣಿ ವಚನ ದರ್ಶನ* *ಚಿಂತನಗೋಷ್ಠಿ*
ರಾಯಬಾಗ:ಶರಣ ವಿಚಾರ ವಾಹಿನಿ ಹಾರೂಗೇರಿ,ಸಪ್ತಸಾಗರದ ಶ್ರೀ ಗುರು ಬಸವ ಸತ್ಸಂಗ ಸಮಿತಿ ಇವರ ಸಹಯೋಗದಲ್ಲಿ ಸಪ್ತಸಾಗರ ಗ್ರಾಮದ ಶರಣ ಬಸಪ್ಪ ಲಕ್ಷ್ಮಣ ಶಿರಗೂರ ಅವರ ವಿದ್ಯಾ ನಗರದ ತೋಟದ ಮಹಾಮನೆಯಲ್ಲಿ ರವಿವಾರ ದಿ. 12 ರಿಂದ ಸೋಮವಾರ ದಿ. 20 ರ ವರೆಗೆ ಅನುಭಾವಿಗಳಿಂದ ಘಟ್ಟಿವಾಳಯ್ಯನ ವಚನ ದರ್ಶನ ಚಿಂತನ ಗೋಷ್ಠಿ ನಡೆಯಲಿದೆ. ದರೂರ ಗ್ರಾಮದ ಶರಣ ಶ್ರೀ ಗಂಗಪ್ಪ ಶರಣರು ಹಾಗೂ ಕೊಣ್ಣೂರ ಗ್ರಾಮದ ಶರಣ ಡಾ. ಬಸವರಾಜ ಚೌಗಲಾ ಅವರಿಂದ ನಿತ್ಯ ಸಂಜೆ 7 ರಿಂದ 8.30 ರವರೆಗೆ ಅನುಭಾವ ನೀಡುವರು. ಸುಕ್ಷೇತ್ರ ನದಿ ಇಂಗಳಗಾಂವ ಗ್ರಾಮದ ಕುಮಾರ ಶಿವಯೋಗಿ ಮಠಪತಿ ಅವರು ಸಂಗೀತ ಸೇವೆ ನೆರವೇರಲಿದೆ ಎಂದು ಶರಣ ಶಿವಕುಮಾರ ಶಿರಗೂರ ಅವರು ಪ್ರಕಟಣೆಯಲ್ಲಿ ತಿಳಿಸಿರುವರು.
ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments