*ಹರಿಸ್ತುತಿ*
ಹರಿಯೆ ನಮಿಸುವೆ ನಿನ್ನ ಚರಣಕೆ
ಧರೆಯ ಬೇಗುದಿ ಕುಗ್ಗಿಸು|
ಪರಿ ಪರಿಯ ದಳ್ಳುರಿಗೆ ಸಿಲುಕಿದ
ಜನರ ಬವಣೆಯ ನೀಗಿಸು||೧||
ಜಗದ ಸರ್ವವು ನಿನ್ನ ಆಣತಿ
ಯಂತೆ ಸಾಗುತಲಿರುವುದು|
ಹಗಲು ರಾತ್ರಿಗಳೆಲ್ಲವೂ ನೀ
ನೆಣಿಸಿದಂತೆಯೆ ನಡೆವುದು||೨||
ಕಡಲಕುವರಿಯ ಪತಿಯೆ ದಿನವೂ
ಬೆಳಗು ಬೈಗುಗಳೆನ್ನದೇ|
ಪಿಡಿದು ಛಲದಲಿ ಅರ್ಪಿಸುವೆ ನಾ
ನನ್ನದೆಲ್ಲವು ನಿನ್ನದೇ||೩||
ನಿನ್ನ ನಾಮಾಮೃತವ ನೆನೆದರೆ
ಭವದ ಬಾಧೆಗಳಳಿವುವು|
ಬನ್ನವೆಲ್ಲವು ಕುಗ್ಗಿ ಮನುಜನ
ಬದುಕು ಸಂತಸಗೊಳುವುವು||೪||
*ಕಿಗ್ಗಾಲು ಎಸ್ ಗಿರೀಶ್*
೨೦-೦೪-೨೦೨೬

.gif)

.gif)


0 Comments