*ದಡ್ಡಣ್ಣನ ಸಮರತಂತ್ರ*
ತಳುವು ಮಾಡುವೆ ಹತ್ತು ದಿವಸಗ-
ಳೊಳಗೆ ಮೋಹರವನ್ನು ನಿಲ್ಲಿಸಿ
ತಳೆದು ಸಂಯಮವನ್ನು ಬನ್ನಿರಿ ನಿಮಗೆ ಗಡುವುಂಟು|
ಒಳಗೊಳಗೆ ನವತಂತ್ರ ರೂಪಿಸಿ
ಬಳಿಕ ದಾಳಿಗೆ ತೊಡಗಿಕೊಳುವನು
ತಿಳಿವು ಕಾಣದ ಮೂರ್ಖನೊಲು ನಡೆಯಿರಿಸಿ ದಡ್ಡಣ್ಣ||೧೮೪||
[ ಭಾಮಿನೀಷಟ್ಪದಿ ]
{ ತಳುವು= ತಡ, ನಿಧಾನ; ಮೋಹರ= ಯುದ್ಧ; ಗಡುವು + ಉಂಟು }
*ಕಿಗ್ಗಾಲು ಎಸ್ ಗಿರೀಶ್*
೨೮-೦೩-೨೦೨೬

.gif)

.gif)


0 Comments