*ಎ ಎ... ತಮ್ಮಗೋಳಿರ್ಯಾ*
೧
ಜಾಲತಾಣದ ಮೋಹದಲಿ ಕಳೆದುಕೊಳ್ಳದಿರಿ ಬದುಕಿನ ಒಲವು,
ಜ್ಞಾನವೆಂಬ ದಾರಿಯಲಿ ಹೆಜ್ಜೆ ಇಟ್ಟರೆ ಸಿಗುವುದು ಗೆಲವು,
ಮೌಲ್ಯಗಳ ಹಣತೆಯ ಹಚ್ಚಿ ಬೆಳಗಿಸಿರಿ ನಿಮ್ಮ ಬದುಕು,
ಎ ಎ... ತಮ್ಮಗೋಳಿರ್ಯಾ, ತಪ್ಪು ದಾರಿಯ ಬಿಟ್ಟು ಸಾಗಿರಿ.
೨
ಹೆತ್ತವರ ಕನಸಿಗೆ ನೀವಾಗಿರಿ ಬದುಕಿನ ಬೆಳಕು,
ಅವರ ಬೆವರ ಹನಿಗೆ ನೀಡಿರಿ ಗೌರವದ ಬೆಲೆ,
ಗುರುಗಳ ಮಾರ್ಗದರ್ಶನದಿ ರೂಪಿಸಿಕೊಳ್ಳಿರಿ ನಾಳೆಯ ನೆಲೆ,
ಎ ಎ... ತಮ್ಮಗೋಳಿರ್ಯಾ, ಅಜ್ಞಾನದ ದಾರಿಯ ಬಿಟ್ಟು ಸಾಗಿರಿ.
೩
ದುಷ್ಟ ಚಟಗಳ ಬಲೆಗೆ ಸಿಲುಕದಿರಿ ಓ ಯುವ ಜನತೆ,
ಶ್ರಮದ ಹಾದಿಯಲಿ ಕಟ್ಟಿಕೊಳ್ಳಿರಿ ಯಶಸ್ಸಿನ ಘನತೆ
ಸಮಯದ ಸದುಪಯೋಗದಿಂದ ಬೆಳೆಸಿಕೊಳ್ಳಿರಿ ವ್ಯಕ್ತಿತ್ವದ ಮಹತೆ,
ಎ ಎ... ತಮ್ಮಗೋಳಿರ್ಯಾ, ಕೆಟ್ಟ ಚಾಳಿಗಳ ಬಿಟ್ಟು ಸಾಗಿರಿ.
೪
ಅಪ್ಪನ ಆಸ್ತಿಯ ನೆರಳಲಿ ಕಳೆಯದಿರಿ ಬದುಕಿನ ಕಾಲ,
ದುಡಿಮೆಯ ಬೆವರಿಂದ ಕಟ್ಟಿಕೊಳ್ಳಿರಿ ಭವಿಷ್ಯದ ಮೇಲು,
ನೈತಿಕತೆಯ ದಾರಿಯಲಿ ಸಾಗಿದರೆ ದೊರೆಯುವುದು ಸುಂದರ ಬಾಳು,
ಎ ಎ... ತಮ್ಮಗೋಳಿರ್ಯಾ, ಸೋಮಾರಿತನ ಬಿಟ್ಟು ಸಾಗಿರಿ.
ಕವಿ: ಡಾ. ಜಯವೀರ ಎ. ಕೆ
ಖೇಮಲಾಪುರ

.gif)

.gif)


0 Comments