ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ನಾಗರತ್ನಮ್ಮ ಎಸ್ ರವರಿಗೆ ಬೋಧಿಸತ್ತ್ವ ಪ್ರಶಸ್ತಿ ಪ್ರದಾನ
ಬೆಂವಿವಿ: ವಸ್ತುಸಂಗ್ರಹಾಲಯದ ಸಂಯೋಜಕರಿಗೆ ಪ್ರೊ. ನಾಗರತ್ನಮ್ಮ ಎಸ್ ರವರಿಗೆ ಬೋಧಿಸತ್ತ್ವ ಪ್ರಶಸ್ತಿ ಪ್ರದಾನ
ಬೆಂಗಳೂರು.ಜೂ.04: ಬೋಧಿಸತ್ತ್ವ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಿದ್ದ ಭಗವಾನ್ ಬುದ್ಧರ 2649ನೇ ಜಯಂತಿ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜಯಂತಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಾರ್ಮಿಕ ದಿನಾಚರಣೆಯ ಅಂಗವಾಗಿ ಬೋಧಿಸತ್ತ್ವ ಟ್ರಸ್ಟ್ 2026 ನೇ ಸಾಲಿನ ಕೊಡಮಾಡುವ ಬೋಧಿಸತ್ತ್ವ ಪ್ರಶಸ್ತಿಯನ್ನು ಬೆಂಗಳೂರು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ವಸ್ತುಸಂಗ್ರಹಾಲಯದ ಸಂಯೋಜಕರು, ಹಿರಿಯ ಪ್ರಾಧ್ಯಾಪಕರಾದ ಪ್ರೊ. ನಾಗರತ್ನಮ್ಮ ಎಸ್. ರವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ನಗರದ ಮಹಾಬೋಧಿ ಸೊಸೈಟಿಯ ಪ್ರದಾನ ಕಾರ್ಯದರ್ಶಿ ಪೂಜ್ಯ ಆನಂದ ಭಂತೇಜಿ, ಟಿ.ನರಸೀಪುರಿನ ಸುಗತೋ ಬುದ್ದಾ ವಿಹಾರದ ಸುಗತಪಾಲ ಭಂತೇಜಿ, ಹಾಗೂ ಬಿಬಿಎಂಪಿ ಮಾಜಿ ಮೇಯರ್ ಶ್ರೀಮತಿ ಜಿ. ಪದ್ಮಾವತಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ, ಬೋಧಿಸತ್ತ್ವ ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಜಿ. ನಾಗರಾಜು ಮತ್ತು ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆಯಲ್ಲಿ ಬೋಧಿಸತ್ತ್ವ ಪ್ರಶಸ್ತಿ ಪಡೆದ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ನಾಗರತ್ನಮ್ಮ ಎಸ್ ರವರಿಗೆ ವಿವಿಯ ಬೋಧಕ-ಬೋಧಕೇತರ ವರ್ಗದವರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಮತ್ತಿತರರು ಶುಭ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments