*ಸ್ಫೂರ್ತಿಯ ಕಿರಣ*

 *ಸ್ಫೂರ್ತಿಯ ಕಿರಣ*



                       ೧


ಬಡತನದ ಬೆಂಕಿಯನು ಮೆಟ್ಟಿ ನಿಂತ,

ಬಾಳಿನ ಕಷ್ಟವನು ಧೈರ್ಯದಿ ಗೆದ್ದ,

ವಿದ್ಯೆಯ ಬೆಳಕನು ಬದುಕಿಗೆ ಹಚ್ಚಿದ,

ವಿನಯದ ಮೆರಗುಲಿ ಮನಗಳ ಗೆದ್ದ.

                         ೨


ಪ್ರಾಧ್ಯಾಪಕರಾಗಿ ಪ್ರಜ್ಞೆಯ ಬಿತ್ತಿದ,

ಪ್ರೀತಿಯ ಮಾತಲಿ ಮನವನು ತಟ್ಟಿದ,

ಸ್ನೇಹದ ಸಿರಿಯಲ್ಲಿ ಬಂಧವ ಬೆಳೆಸಿದ,

ಸಂಸ್ಕಾರದ ಹಾದಿಯಲಿ ಗೌರವ ಗಳಿಸಿದ.


                     ೩


ಕನ್ನಡದ ಕಂಪನು ಕಂಠದಿ ಮೂಡಿದ,

ಕರುಣೆಯ ಮನದಿ ಕನಸುಗಳ ನೆಟ್ಟಿದ,

ನಿಸ್ವಾರ್ಥ ಬದುಕನು ನಗುತಲೇ ನಡೆಸಿದ,

ನೈತಿಕ ಮೌಲ್ಯದ ದೀಪವ ಬೆಳಗಿದ.


                     ೪


ನಿರಾಡಂಬರ ಬದುಕಿನ ನಿಜ ಶರಣ,

ನಿಮ್ಮ ವ್ಯಕ್ತಿತ್ವವೇ ನಮಗೆ ಸ್ಪೂರಣ,

ತುಕಾರಾಮ ವಂಟಗೂಡಿ ಹೆಸರು ಚಿರಸ್ಮರಣ,

ಜನಮನ ಗೆದ್ದ ಸ್ಫೂರ್ತಿಯ ಕಿರಣ..!


ಕವಿ:ಡಾ. ಜಯವೀರ ಎ. ಕೆ.

         ಖೇಮಲಾಪುರ 

:

Image Description

Post a Comment

0 Comments