*ಕಾವ್ಯ ಧಾರೆ*
*ನನ್ನ ಕಾಲೇಜು*
೧
ನಿಸರ್ಗದ ಮಡಿಲಲಿ ನಿಂತ ಜ್ಞಾನದ ಮಂದಿರ,
ಕೆ ಎಲ್ ಇ ಕೀರ್ತಿಯಲಿ ಬೆಳಗಿದ ವಿದ್ಯಾಸಾಗರ,
ಶಿರಗುಪ್ಪಿ ನೆಲದಲಿ ಅರಳಿದ ಭವಿಷ್ಯದ ಅಕ್ಷಯಾಕರ.
೨
ಸಿದ್ದೇಶ್ವರ ಶ್ರೀಗಳ ಕರಸ್ಪರ್ಶದ ಪಾವನ ತಾಣ,
ಪ್ರಾಚಾರ್ಯರ ನೇತೃತ್ವದಿ ಬೆಳಗಿದೆ ಜ್ಞಾನದ ವಿಹಾನ,
ಗುರುಗಳ ಮಾರ್ಗದರ್ಶನದಿ ವಿದ್ಯಾರ್ಥಿಗಳ ಸಾಧನೆ ಮಹಾನ್.
೩
ಶ್ರದ್ಧೆಯ ಹೆಜ್ಜೆಯಲಿ ಸಾಗುವ ಗ್ರಾಮೀಣ ಪ್ರತಿಭೆಗಳು,
ನಿಷ್ಠೆಯ ಬೆಳಕಲಿ ಹೊಳೆಯುವ ವಿದ್ಯೆಯ ಕನಸುಗಳು,
ಗುರು–ಹೆತ್ತವರ ಕೀರ್ತಿಗೆ ಪಾತ್ರರಾಗುವ ಸಿರಿ ಮೊಗ್ಗುಗಳು.
೪
ಪಠ್ಯ–ಪಠ್ಯೇತರ ಚಟುವಟಿಕೆಯಲಿ ಮೆರೆದ ಚೈತನ್ಯ,
ಸಾಧನೆಯ ಹಾದಿಯಲಿ ಅರಳಿದ ವಿದ್ಯಾರ್ಥಿ ವೈಭವ ಧನ್ಯ,
ಮನುಕುಲದ ನಂದಾದೀಪವಾಗಿ ಹೊಳೆಯುತಿದೆ ಯುವ ಜನ್ಯ.
೫
ಜ್ಞಾನವನು ಬಿತ್ತಿದ ಗುರುಗಳ ದಿವ್ಯ ಸ್ಪರ್ಶದಿ,
ಸಂಸ್ಕಾರವನು ಕಲಿತ ವಿದ್ಯಾರ್ಥಿ ಹೃದಯದ ಹರ್ಷದಿ,
ಕಾಲೇಜಿನ ಕೀರ್ತಿ ಬೆಳಗುತ್ತಿದೆ ಸಾಧನೆಯ ಉತ್ಸಾಹದ ದೀಪದಿ.
ಕವಿ: ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments