( ಭಕ್ತಿಗೀತೆ )
*ರಾಘವೇಂದ್ರಸ್ವಾಮಿ ಸ್ತುತಿ*
ರಾಘವೇಂದ್ರರ ನಾಮನೆನೆದರೆ
ಬದುಕು ಪಾವನಗೊಳುವುದು|
ನೀಗುವುದು ಭವ ನಿಮಿಷಮಾತ್ರದಿ
ದುಗುಡವಾಕ್ಷಣ ತೊರೆವುದು||೧||
ಎಲ್ಲ ಗುರುವಾರದಲಿ ಸ್ವಾಮಿಯ
ಪೂಜೆಗೆಳಸುವೆ ಸ್ಮರಿಸುತ|
ಬಲ್ಲಿದರು ನೀವೆಂಬ ನಂಬಿಕೆ
ನನ್ನ ಮನದಲಿ ಇರಿಸುತ||೨||
ಕರುಣೆಕಡಲಿನ ಅಲೆಗಳಲಿ ನಾ
ತೇಲಲೆಣಿಸುವೆ ನಿತ್ಯವೂ
ಹರಿಸು ನೀನಮಗೆಂದು ಬೇಡುವೆ
ನಿನ್ನ ಸನ್ನಿಧಿ ನಿತ್ಯವೂ||೩||
ಜಗದ ತಲ್ಲಣವಳಿಸುವಂತಹ
ಶಕ್ತಿ ನಿನ್ನೊಳು ಕಾಣುವೆ|
ಮುಗಿದು ಕರವನು ಬೇಡಿಕೊಳ್ಳುವೆ
ನಿನಗೆ ಶಿರವನು ಬಾಗುವೆ||೪||
*ಕಿಗ್ಗಾಲು ಎಸ್ ಗಿರೀಶ್*
೩೦-೦೪-೨೦೨೬

.gif)

.gif)


0 Comments