*ನಲುಮೆಯ ಬದುಕಿಗೆ ಸೂತ್ರ*
ಕಳೆದ ದಿನಗಳು ಘಟಿತ ಬೇಸರ-
ಗಳಿಗೆ ಶೋಕಿಸಬೇಡ ನಾಳೆಯ
ಹಲವು ನಡೆಗಳ ನೆನೆದು ಮನದೊಳಗಿಂದು ಬೆದರದಿರು|
ತಿಳಿವು ನಿನಗಿರಬೇಕು ದಿನವೂ
ತಳೆದು ಸಂತಸವನ್ನು ನೀನೀ
ಘಳಿಗೆ ಮೊಗದಲಿ ಹರಿಸು ಕಿರುನಗೆ ಬದುಕಿಗಿದು ಸೂತ್ರ||೧೮೫|`
[ ಭಾಮಿನೀಷಟ್ಪದಿ ]
*ಕಿಗ್ಗಾಲು ಎಸ್ ಗಿರೀಶ್*
೨೮-೦೩-೨೦೨೬

.gif)

.gif)


0 Comments