ಸ್ವರಚಿತ ಕವನ ರಚನೆ ದಿನಾಂಕ : ೦೬.೧೨.೨೦೨೪ ಶೀರ್ಷಿಕೆ : ಮಹಾನಾಯಕ

 ಕವಿವಾಣಿ ಸಾಹಿತ್ಯ ಪರಿಷತ್ತು, ಕರ್ನಾಟಕ ವತಿಯಿಂದ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ, ಹಮ್ಮಿಕೊಂಡಿರುವ ಕಾವ್ಯನಮನ ಕಾರ್ಯಕ್ರಮ.

*****************************

ವಿಷಯ : ಡಾ. ಬಿ. ಆರ್.   

           ಅಂಬೇಡ್ಕರ್ ಅವರ ಕುರಿತು.

ಪ್ರಕಾರ : ಸ್ವರಚಿತ ಕವನ ರಚನೆ

ದಿನಾಂಕ : ೦೬.೧೨.೨೦೨೪

ಶೀರ್ಷಿಕೆ : ಮಹಾನಾಯಕ


*****************************

ಸಂವಿಧಾನವೆಂಬ ಗ್ರಂಥ ಬರೆದ !

ಸರ್ವರಿಗೂ ಸಕಲವೂ ನೀಡಿದ !

ನಮ್ಮ ಅಂಬೇಡ್ಕರ ಮಹಾನಯಕ !!


ನ್ಯಾಯವೊಂದೇ ದೇವರೆಂದ !

ಅನ್ಯಾಯವನ್ನ ತಡೆಯಿರೆಂದ !

ನಮ್ಮ ಅಂಬೇಡ್ಕರ ಮಹಾನಾಯಕ !!


ಮೇಲು ಕೀಳು ಮೆಟ್ಟಿ ನಿಂತ !

ಸರಿಸಮಾನತೆ ಕಾಣಿರೆಂದ !

ನಮ್ಮ ಅಂಬೇಡ್ಕರ ಮಹಾನಾಯಕ !!


ಮೂಢನಂಬಿಕೆ ಅಳಿಸಿ ಹಾಕಿದ !

ಜ್ಞಾನ ಬೀಜವ ಬಿತ್ತಿ ಬೆಳೆದ !

ನಮ್ಮ ಅಂಬೇಡ್ಕರ ಮಹಾನಾಯಕ !!


ಇವರೇ‌ ನೋಡು ನಮ್ಮ ಭೀಮ !

ಇರುವವರಲ್ಲೇ ಮಹಾಮಹೀಮ !

ಅಂಬೇಡ್ಕರರಿಗೆ ಕೋಟಿ ನಮನ !!


~ಡಾ. ಶಿವಕುಮಾರ. ಲಾ. ಸೂರ್ಯವಂಶ,‌ ಕಲಬುರಗಿ.

Image Description

Post a Comment

0 Comments