“ಇದು ಚಿತ್ರಕ್ಕಾಗಿ ಬರೆದ ಕವಿತೆಯಲ್ಲ. ಚಿತ್ರವೇ ಬರೆಸಿದ ಭಾವಗೀತೆ. ಅಂತರ್ಜಾಲದಲ್ಲಿ ಕಂಡ ಈ ಚಿತ್ರ ನನ್ನೆದೆಯಲ್ಲಿ ಮೂಡಿಸಿದ ಭಾವಸಂವೇದನೆಗಳ ಅಕ್ಷರರೂಪವೇ ಈ ಕವಿತೆ. ಈ ಡಿಜಿಟಲ್ ಯುಗದಲ್ಲಿ ಕ್ರಿಯಾತ್ಮಕ ಮನಸುಗಳು ಏನೇನೆಲ್ಲ ಅದ್ಭುತಗಳನ್ನು ಕಲ್ಪಿಸಿಕೊಳ್ಳುತ್ತವೆ. ಆ ಕಲ್ಪನೆಗಳನ್ನು ಅದೆಷ್ಟು ಅನನ್ಯವಾಗಿ ಅಭಿವ್ಯಕ್ತಿಸುತ್ತವೆ. ಅದೆಷ್ಟು ಅಪೂರ್ವವಾಗಿ ವಿನ್ಯಾಸಗೊಳಿಸುತ್ತವೆ. ನಿಜಕ್ಕೂ ಇಂತಹ ಡಿಜಿಟಲ್ ಚಿತ್ರಕಾರರಿಗೊಂದು ಅಚ್ಚರಿತುಂಬಿದ ಸಲಾಮ್. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಮುಷ್ಠಿ..!
ಕಟ್ಟಿದ ಮುಷ್ಠಿಯಂತೆ
ಹಿಡಿಗಾತ್ರದ ಹೃದಯ
ಆಗದಿರಲೆಂದು ಕಠಿಣ.!
ಸ್ಫುರಿವ ಸಮಷ್ಟಿಯಂತೆ
ಹೃದಯ ವೈಶಾಲ್ಯದಿ
ಹರಿಸುತಿರಲಿ ಕರುಣ.!
ಹೃದಯ ಮುಷ್ಠಿಕಟ್ಟುತ
ಮೆರೆದವರೆಲ್ಲಾ ನಿತ್ಯವು
ನರಳಿದರು ಬದುಕಲ್ಲಿ.!
ಎದೆಯ ಅಬ್ಧಿಯಾಗಿಸಿ
ಮೊರೆದವರೆಲ್ಲ ಸದಾ
ನಳನಳಿಸಿದರು ಬೆಳಕಲ್ಲಿ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments