ಸಕ್ಕರೆಯ ನಾಡಿನಲ್ಲಿ... ಕನ್ನಡಾಂಬೆಯ ರಥ ಯಾತ್ರೆ...

 ಕವನದ ಶೀರ್ಷಿಕೆ 



ಸಕ್ಕರೆಯ ನಾಡಿನಲ್ಲಿ...

 ಕನ್ನಡಾಂಬೆಯ ರಥ ಯಾತ್ರೆ...





ಪ್ರಕೃತಿಯಲ್ಲಿಯೂ ಅದೆಷ್ಟು ಪ್ರೀತಿ 

ಕನ್ನಡಾಂಬೆಯ ಬಗೆಗೆ 

ಸಕ್ಕರೆ ನಾಡಿನ 

ಅಕ್ಕರೆಯ ಪ್ರೀತಿ 

ಅಖಿಲ ಭಾರತ ಕನ್ನಡ ಸಾಹಿತ್ಯ ರಥಯಾತ್ರೆಯು

ಸಾಗುತ್ತಿದೆ ಸಕ್ಕರೆ ನಾಡಿನಲ್ಲಿ 

ನೋಡಲು ಅದೆಷ್ಟು ಚಂದ 

ಆ ಕಬ್ಬಿನ ಗದ್ದೆ 

ಭತ್ತದ ಗದ್ದೆಯ 

ಆ ಬಣ್ಣಗಳು ಕಣ್ 

ಒಲವನ್ನು ಹೆಚ್ಚಿಸುತ್ತೇವೆ 

ಕಬ್ಬಿನ ಅ ಹೂವು 

ಅದೆಷ್ಟು ಮನೋಹರ 

ತಾಯಿಯ ಸಾಹಿತ್ಯ ರಥಯಾತ್ರೆಗೆ 

ರಾಜಭಟ್ಟರು ಈಟಿ ಹಿಡಿದು ನಿಂತಂತೆ

 ರಸ್ತೆಯ ಆಜು ಬಾಜಿನಲ್ಲಿ 

ಚಿನ್ನದ ಒಡವೆಯಂತ

ತಳತಳಿಸುವ  ಭತ್ತದ 

ಹೊನ್ನಬಣ್ಣ

ಕನ್ನಡಿಗರ ಆ ಸಂಭ್ರಮ 

ರಥಯಾತ್ರೆಯ 

ನೋಡಿದ ಭಾಗ್ಯ 

ನನಗೂ ದೊರಕಿತು 

ಮಂಡ್ಯ ಒಂದು ಹಳ್ಳಿಯಲ್ಲಿ 

ಅಲ್ಲಿರುವ ಜನರು 

ಹಾಡಿ ಕುಣಿದರು 

ತಾಯಿಯ ನೋಡಿ 

ಹರುಷದಿ...



      ಸರಿತ.ಹೆಚ್

     ಕಾಡುಮಲ್ಲಿಗೆ...✍️...

Image Description

Post a Comment

0 Comments