*ಏ ಮಾನವ., ನೀನು ಬರುವಾಗ ತಂದಿದ್ದಾದರೂ ಏನೂ ..?! ಹೋಗುವಾಗ ತೆಗೆದುಕೊಂಡು ಹೋಗುವದಾದರೂ ಏನೂ
ಹೇಳುವೆಯಾ..? ಬೆತ್ತಲೆ ಬಂದು ಬೆತ್ತಲೆ ಹೋಗುವ ಸತ್ಯ ನಿನಗೆ ಗೊತ್ತಿದ್ದರೂ ಕೂಡ...,*
*ಜಾತಿ ಧರ್ಮ ಲಿಂಗ ಹೀಗೆ ನೂರೆಂಟು ನಿಯಮ ಮಾಡಿಕೊಂಡು ತಾರತಮ್ಯದ ದಳ್ಳುರಿಯಲ್ಲಿ ಬೇಯುತ್ತ ಅಮಾನವೀಯವಾಗಿ ನಡೆದುಕೊಳ್ಳುವ ನಿನ್ನ ನೀಚ ಬುದ್ದಿಗೆ ಏನೆನ್ನಲಿ..?* ದುರ್ಬಲರಾದ ಯಾರನ್ನೂ ನೀನು ಬಿಡುವುದಿಲ್ಲ. ಬಡವರು ಶೋಷಿತರು, ಪ್ರಾಣಿ ಪಕ್ಷಿ, ನಿಸರ್ಗ..?!!!
*"ಸಾಯಿಸುವದು ನಿನ್ನ ಗುಣ, ಬದುಕಿಸುವದು ನನ್ನ ಗುಣ. ನಿನ್ನ ಪೂರ್ವಜರು ಈಗ ನೀನು ನಾಳೆ ನಿನ್ನ ಪೀಳಿಗೆ ಎಲ್ಲರಿಗೂ ನಾನು ಜೀವ ನೀಡುತ್ತೇನೆ. ನಿನ್ನ ಕೋಪಕ್ಕೆ ಬಲಿಯಾದ ನಾನು ಈಗಲೂ ನಿನ್ನ ಹಸಿವೆ ತೀರಿಸಲು ಹಣ್ಣು ಕೊಡುತ್ತಿದ್ದೇನೆ. ತಗೋ ತಿನ್ನು ಆರಾಮಾಗಿರು. ಸುಖವಾಗಿರು"*.
*"ನಮ್ಮಂತೆಯೇ ಇರುವ ಮನುಷ್ಯರಿಗೂ, ನಿಸರ್ಗಕ್ಕೂ ದ್ರೋಹ ಬಗೆಯುವ ಮುನ್ನ ಯೋಚಿಸು, ಕರ್ಮದ ಫಲ ಯಾರನ್ನೂ ಬಿಡದು"*.
✍️ಗಗೋಚ🙏
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments