*ಆತ್ಮೀಯರೇ ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ..*
*ದೀಪಾವಳಿ* (ಕವನ)
""""""""""""""""
ದೀಪದಿಂದ ದೀಪ ಹಚ್ಚಿ
ಕಡ್ಡಿ ಗಿರಿ ಪಟಾಕಿ ಮೆಚ್ಚಿ
ಬರುವ ಶಬ್ದದಿ ಖುಷಿ ಹೆಚ್ಚಿ
ಬೆಳಕು ದುತ್ತನೆ ಮೇಲಕ್ಕೇರಿ
ಭೂವಿಯ ತುಂಬಾ ಬರಿ ಕತ್ತಲೆ//
ನಮಗೇಕೆ ಪಟಪಟ ಪಟಾಕಿ ಸದ್ದು
ಪರಿಸರದಲ್ಲೆಲ್ಲಾ ಮಾಲಿನ್ಯದೆ ದೂಳು
ಬೇಗ ವೇಗ ಹುಡುಕಬೇಕಿದೆ ಮದ್ದು
ಇರದಿರೆ ನಮಗೆಲ್ಲ ವಿನಾಶ ತಪ್ಪದು//
ಭ್ರಷ್ಟತೆಯ ಶಬ್ದ ಮೊಳಗುತಿದೆ ಎಲ್ಲೆಡೆ
ಶೋಷಣೆಯ ಶಬ್ದ ಮುಗಿಲು ಮುಟ್ಟಿದೆ
ಅಸಮಾನತೆಯ ಶಬ್ದ ದೇಶದಲ್ಲೆಡೆ ಹರಡಿದೆ
ಪಟಾಕಿ ಶಬ್ದದಡಿ ಎಲ್ಲವ ಮರೆಸಿದೆ//
ದೀಪವ ಉರಿಸಿ ಬೆಳಕನು ಬರಿಸೋಣ
ಪ್ರೀತಿ ಕರುಣೆಯಿಂದ ಅಂಧಕಾರವ ಓಡಿಸೋಣ
ಕತ್ತಲೆಯಿಂದ ಬೆಳಕಿನೆಡೆ ಎಲ್ಲರ ಸೇರಿಸೋಣ
ಅಜ್ಞಾನದಿಂದ ಜ್ಞಾನದೆಡೆ ಸಾಗಿಸೋಣ
ಸಮರಸದಿ ಬಾಳೋಣ ಎಲ್ಲರ ಬೆರೆಸೋಣ//
**********
ಗಣಪತಿ ಗೋ ಚಲವಾದಿ (ಗಗೋಚ)
ಬಿಎಂಟಿಸಿ ನಿರ್ವಾಹಕರು
ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments