ನುಡಿಯಲ್ಲೇ ನಡೆದು
ಕೃತಿಯಲ್ಲಿ ಪ್ರಕೃತಿಯಾಗಿ ಪಂಚಭೂತಗಳಲ್ಲಿ ಲೀನವಾಗಿ ನಿಸರ್ಗವಾಗಿ ಉಳಿದವರು ಎಷ್ಟಿಹರು ಜಗದಲಿ?
ಆಸೆಗಳನ್ನು ಮಿತಗೊಳಿಸಿ, ಹಿತ-ಮಿತ ನುಡಿಗಳು
ಸತ್ಯ ಸತ್ವ ಸುಂದರ ವಿಚಾರಗಳು
ಕತ್ತಲೆ ಕರಗಿಸುವ ಬೆಳಕಾಗಿ ಕೋಟಿ ನಕ್ಷತ್ರ ತಾರೆಗಳೆ ನಾಚುವಂತೆ,
ಬಾಳಿ ಬೆಳಗಿದ ಯೋಗಿ
ರೋಗ - ರುಜಿನ ಸಾವು - ನೋವು ಕಷ್ಟ- ನಷ್ಟ ಯಾರನ್ನು ಬಿಡಲಿಲ್ಲವಾದರೂ
ಮನುಷ್ಯ ಜನ್ಮವೇ ಹೆಮ್ಮೆ ಪಡುವಷ್ಟು
ಸರಳ ಸೌಜನ್ಯ, ಜ್ಞಾನ - ವಿಜ್ಞಾನದ ಪ್ರತೀಕ
ಮಾಡಿದ ಬೋಧವೆಲ್ಲ ವೇದವಾಗಿದೆ
ಜಗದ ಸರ್ವ ಶ್ರೇಷ್ಠ ತತ್ವಜ್ಞಾನಿಗಳ ಸೇರಿ
ತಾನೊಂದು ಕ್ರಾಂತಿಯಾಗಿ ಬೆಳೆದು
ಹಾಡುವ ಕೋಗಿಲೆಗಳ ಮಾಮರವಾಗಿ
ಕವಿಯಾಗಿ ಪ್ರವಚನಗಾರನಾಗಿ ಈ ಯುಗದ
ಪ್ರವರ್ತಕನಾಗಿ ವಚನ ನಿರ್ವಹಿಸಿದ ಸರಳ ಸಾಧು
ಸಾಮಾನ್ಯ ಕುಟುಂಬದಲ್ಲಿ ಸಾಮಾನ್ಯನಾಗಿ ಹುಟ್ಟಿ ಬಯಲು ಸೀಮೆಯಲಿ
ಆಧ್ಯಾತ್ಮ -ಜ್ಞಾನ ಜಲವಾಗಿ ಹರಿದು
ಯೋಗಿಯಾಗಿ, ತ್ಯಾಗಿಯಾಗಿ, ಉತ್ತಮರಲ್ಲೇ ಸರ್ವೋತ್ತಮನಾಗಿ
ದೃತಿಗಡದೆ, ಮತಿಗಡದೆ ಸನ್ಮಾರ್ಗದಲ್ಲಿ ತಾನೊಂದು ಕೃತಿಯಾಗಿ,
ಕೋಟಿ ಮನಗಳಿಗೆ ಜ್ಞಾನ ಉನ ಬಡಿಸಿ
ಹುಟ್ಟು ಸಾವಿನ ನಡುವೆ
ಸೃಷ್ಟಿಗೆ ಸಮನಾದ ಸಂತ-ಶರಣ ಸದ್ಗುಣಿ, ನಿಜಗುಣಿ, ಸುಯೋಗಿ
ಅದೆಂತ ನಡೆ-ನುಡಿ
ಆಚಾರ- ವಿಚಾರ
ಸಂಸ್ಕೃತಿ ಸಂಸ್ಕಾರ?
ಎಂಥಾ ಮಾತುಗಾರಿಕೆ?
ಜ್ಞಾನ -ವಿಜ್ಞಾನ, ಪ್ರವಚನ, ವಿವೇಚನ
ವಿಶಾಲತೆ, ವಿವೇಕ,ವಿದ್ಯೆ ಝರಿಯಾಗಿ,ಹರಿಯಾಗಿ ನದಿಯಾಗಿ
ಸಾಗರ -ಸಮೃದ್ಧಿಯಾಗಿ ಮೃದುವಾಗಿ,ಸಂಜೀವಿನಿಯಾಗಿ, ವಾಹಿನಿಯಾಗಿ,ಭಾಷೆಯಾಗಿ, ಬದುಕಾಗಿ,ಬಲವಾಗಿ, ಛಲವಾಗಿ ಪ್ರಕೃತಿಯಲ್ಲಿ ಒಂದಾಗುವ ಬಯಕೆ
ಎಂಥಾ ದೃಢ ನಿರ್ಧಾರ?
ಅಸ್ತಿ ಇಲ್ಲ, ಆಸ್ತಿ ಇಲ್ಲ
ಗುಡಿ- ಗುಂಡಾರ ಅರಮನೆಯಿಲ್ಲ
ಆಡಂಬರವಿಲ್ಲ ಆದರೂ ಅಳಿದಿಲ್ಲ, ಮರೆಯಾಗಿಲ್ಲ ನದಿಯಲ್ಲಿ ನೀರಾಗಿ, ಪ್ರಕೃತಿಯಲ್ಲಿ ಹಸಿರಾಗಿ, ತನು-ಮನಗಳಲ್ಲಿ ಉಸಿರಾಗಿ ಬೆಳಕಾಗಿ ಮರುಜನ್ಮ ಪಡೆದವರು
ಸರ್ವಶ್ರೇಷ್ಠ ಸಿದ್ದೇಶ್ವರ ಮಹಾ ಸ್ವಾಮೀಜಿಗಳಿಗೆ
ಭಕ್ತಿಗಾಗಿ ನುಡಿ ನಮನ
ಡಾ.ಮಹಾದೇವ ಪೋತರಾಜ್
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments