*ಭಕ್ತಿಯ ಬೇರು ಭಾವೈಕ್ಯತೆಯ ಹೂ*
೧
ಕೃಷ್ಣೆ ತೀರದೊಳು ಖೇಮಲಾಪುರ ಸೊಬಗಿನ ಊರು,
ಕಬ್ಬಿನ ತೋಟದೊಳು ಹಸಿರೆರೆದ ಪ್ರಕೃತಿ ನೂರು,
ರಸ್ತೆಯ ಇಕ್ಕೆಲದೊಳು ನಲಿವಿನ ಹಸಿರು ಜಾಲ,
ಕಣ್ಣಿಗೆ ಹಬ್ಬವಿದು, ಮನಕೆ ಮಧುರ ಕಂಗೊಳಾಲ.
೨
ಅರಣ್ಯ ಸಿದ್ದೇಶ್ವರರ ಪವಾಡದ ಪುಣ್ಯಧಾಮ,
ಭಕ್ತರ ಕಾಮಧೇನು, ಭಂಡಾರದ ದಿವ್ಯನಾಮ,
ಶ್ರಾವಣ ಸೋಮವಾರ ಪಲ್ಲಕ್ಕಿಯ ವೈಭವ ರಂಗ,
ಅನ್ನದಾಸೋಹದೊಳು ಅರಳುವುದು ಭಕ್ತಿಯ ಸಂಗ.
೩
ಜೈನ ಬಸದಿ ನಿಂತಿದೆ ಇತಿಹಾಸದ ಸಾಕ್ಷಿಯಾಗಿ,
ಸಿದ್ದಾರೂಢ ಮಠ ಬೆಳಗುತ್ತದೆ ಧರ್ಮದ ದೀಪವಾಗಿ,
ಯಮನೂರಪ್ಪ ಉರುಸದೊಳು ಭಾವೈಕ್ಯದ ಹೂ ಅರಳುತ,
ಹಿಂದೂ–ಮುಸ್ಲಿಂ ಹೃದಯದೊಳು ಸೌಹಾರ್ದವೇ ಮೊಳೆಯುತ.
೪
ಶಾಲೆಯ ಬೆಳಕಿನೊಳು ಬದುಕು ಕಂಡ ಅನೇಕ ಜೀವ,
ನಾಡು–ವಿದೇಶದೊಳು ಮೂಡಿದೆ ಸಾಧನೆಯ ಭವ್ಯ ತೀವ,
ಭಜನೆ–ಡೊಳ್ಳಿನ ನಾದದಿ ಜೀವಿಸುವ ಜನಮನ,
ಭಕ್ತಿಯ ಬೇರು ಭಾವೈಕ್ಯತೆಯ ಹೂ ಕನ್ನಡದ ಹೆಮ್ಮೆಯ ಧನ.
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments