*ಡಿವಿಜಿಯವರನ್ನು ಸ್ಮರಿಸುತ್ತ*
( ಇಂದು ಗುಂಡಪ್ಪನವರ ಜನ್ಮದಿನ )
ಬದುಕಿನಲಿ ನಮಗೆದುರು ಬರುತಿರುವ ಘಟನೆಗಳ
ಹದವಾಗಿ ಕಗ್ಗದಲಿ ತಿಳಿಸಿದಿರಿ ನೀವು|
ಇದನೆಲ್ಲ ಅರ್ಥೈಸಿಕೊಂಡ ಮನುಜನ ಬಾಳು
ಹದುಳಗೊಳುವುದು ಖಚಿತ ಗಿರಿಗಳೀಶ||೬೫೫||
{ಹದವಾಗಿ= ಸಮಪ್ರಮಾಣದಲ್ಲಿ; ಹದುಳ= ಕ್ಷೇಮ}
*ಕಿಗ್ಗಾಲು ಎಸ್ ಗಿರೀಶ್*
೧೭-೦೩-೨೦೨೬

.gif)

.gif)


0 Comments