ಒಗ್ಗಟ್ಟಿಲ್ಲದೆ ಉಳಿಗಾಲವಿಲ್ಲ

 ಒಗ್ಗಟ್ಟಿಲ್ಲದೆ ಉಳಿಗಾಲವಿಲ್ಲ 



 ಶಿಕ್ಷಣದ ಬೆಳಕು ಬಾಳು ಬೆಳಗುವುದು 

 ಹೋರಾಟ ಹೊಸ ಬದುಕಿಗೆ ನಾಂದಿ ಹಾಡುವುದು 

 ಸಂಘಟನೆ ಒಗ್ಗಟ್ಟಿನ ಬಲದ ಪಾಠ ತಿಳಿಸುವುದು 

 ಬಾಬಾ ಸಾಹೇಬರ ತ್ಯಾಗ ಜೀವನ ನಮಗೆ ಮಾದರಿಯಾಗಿರುವುದು.


 ಈ ತ್ರಿಶಕ್ತಿಗಳ ಅರಿವು ನಮಗಾದರೆ 

 ಗೆಲುವಿನ ದಾರಿ ತಾನಾಗೇ ತೋರುವುದು 

 ಪ್ರಾಮಾಣಿಕತೆಯ ಶ್ರಮವು ಫಲ ನೀಡುವುದು 

 ವಿಮೋಚನ ಶಕ್ತಿಯು ದಾರಿದೀಪವಾಗುವುದು.


 ಒಳಮೀಸಲಾತಿಯ ಹುನ್ನಾರ ಅರಿತುಕೊಂಡರೆ 

 ಬಲಗೈ ಸಮುದಾಯ ಎಚ್ಚ ರ ಗೊಂಡರೆ

 ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಿಸಲು

 ಎಲ್ಲರೂ ಪಣತೊಡುವರು ಹೋರಾಟಕ್ಕೆ ಒಗ್ಗಟ್ಟಾಗಲು.


 ದುಶ್ಚಟಗಳಿಗೆ ಬಲಿಯಾಗದೆ ಮೌಡ್ಯತೆಗೆ ಒಳಗಾಗದೆ 

 ಕ್ಷಣಿಕ ಸುಖಕ್ಕೆ ಹಾತೊರೆಯದೆ ಒಂದಾಗದೆ 

 ಸ್ವಾರ್ಥಿಗಳಾದರೆ ಮಕ್ಕಳ ಭವಿಷ್ಯ ರೂಪಿಸದೆ 

 ನಮ್ಮಷ್ಟಕ್ಕೆ ನಾವಿದ್ದರೆ ಒಗ್ಗಟ್ಟಿಲ್ಲದಿದ್ದರೆ ಉಳಿಗಾಲವಿಲ್ಲ ಓ ಕುಲ ಬಾಂಧವರೇ.


 ಶ್ರೀಮತಿ ಜ್ಯೋತಿ ಸಂಜು ಮುರಾಳೆ.ಕಬ್ಬೂರ

Image Description

Post a Comment

0 Comments