ಅಗೋಚರ.!

 "ಅವ್ಯಕ್ತ ಸಂವೇದನೆಗಳ ಕಾವ್ಯಾಂಬುಧಿಯಿದು. ಅಗೋಚರ ಅರ್ಥಗಳ ಭಾವಶರಧಿಯಿದು. ವಾಚ್ಯ ಸಂಗತಿಗಳ ಹರಿವಿಗಿಂತ, ಸೂಚ್ಯ ವಿಷಯಗಳ ಹರವಿದೆ. ಅರಿತಷ್ಟೂ ಸಾರವಿದೆ. ಅರ್ಥೈಸಿದಷ್ಟೂ ವಿಸ್ತಾರವಿದೆ. ಕಂಬನಿ ಬಿಂದುಗಳ ಹನಿಗವಿತೆಯಲ್ಲ. ಕಣ್ಣೀರ ಸಿಂಧುವಿನ ಭಾವದೊರತೆಯಿದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


ಅಗೋಚರ.!



ಅವನು ಅವಳ

ನೆನಪಾದಾಗಲೆಲ್ಲಾ.....

ಈಜುಕೊಳಕ್ಕೆ

ಹೋಗುವನು ಈಜಾಡಲು.! 


ಅವಳು ಅವನ

ನೆನಪಾದಾಗಲೆಲ್ಲಾ.....

ಅಡುಗೆಕೋಣೆಗೆ 

ಹೋಗುವಳು ಈರುಳ್ಳಿಹೆಚ್ಚಲು.!


ಕಾಯ್ದಿಹರು ಕಣ್ಣೀರಿನ 

ನೋವು ನರಳಿಕೆಯೆಲ್ಲ

ಲೋಕದ ಕಣ್ಣೆದುರು

ಆಗದಂತೆ ಬಟಾಬಯಲು.!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments