* ಬೇವೂರು ಕಾಲೇಜಿನಲ್ಲಿ ಜಾಗೃತಿ ಅರಿವು ಸಪ್ತಾಹ*

 *ಬೇವೂರು ಕಾಲೇಜಿನಲ್ಲಿ ಜಾಗೃತಿ ಅರಿವು ಸಪ್ತಾಹ*   


                

 ಬೇವೂರು : ಯುವಕರು ದೇಶದ ಆಸ್ತಿಯಾಗಿದ್ದು ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಕಂಕಣ ಬದ್ದರಾಗಬೆಕೆಂದು ಉಪನ್ಯಾಸಕರಾದ ಎಸ್.ಎಸ್.ಆದಾಪೂರ ಹೇಳಿದರು. ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಬೆಕೆಂದು ಹೇಳಿದರು. ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿದ ಡಾ.ಸಂಗಮೇಶ ಹಂಚಿನಾಳ ಬುದ್ದ, ಬಸವ,ಅಂಬೇಡ್ಕರ್ ಅವರು ಈ ನೆಲದಲ್ಲಿ ಜಾಗೃತಿ ಮೂಡಿಸಿ ಚಿರಸ್ಮರಣೀಯರೆನಿಸಿದ್ದಾರೆ. ಆರೋಗ್ಯ,ಪರಿಸರ ಕಾಳಜಿ, ಭ್ರಷ್ಟಾಚಾರ ,ಮುಂತಾದವುಗಳ ಕುರಿತು ಜಾಗೃತಿ ಮೂಡಿಸಲು ಎನ್.ಎಸ್.ಎಸ್. ಸಪ್ತಾಹ ಚಟುವಟಿಕೆಗಳು ಪ್ರೇರಕ ಎನಿಸಿವೆ ಎಂದರು. ಕಾಯ೯ಕ್ರಮದಲ್ಲಿ ಪ್ರಾಚಾಯ೯ರಾದ ಡಾ.ಜಗದಿಶ ಭೈರಮಟ್ಟಿ, ಹಿರಿಯ ಉಪನ್ಯಾಸಕರಾದ ಬಿ.ಬಿ.ಬೇವೂರು, ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳಾದ ಜಿ.ಎಸ್.ಗೌಡರ,ಇಂಗ್ಲೀಷ ಉಪನ್ಯಾಸಕ ಡಿ.ವಾಯ್.ಬುಡ್ಡಿಯವರ,ಡಾ.ಎ.ಎಮ್.ಗೊರಚಿಕ್ಕನವರ ಉಪಸ್ಥಿತರಿದ್ದರು. ನಾಗೇಶ ಬೆಣ್ಣೂರು ನಿರೂಪಿಸಿ ವಂದಿಸಿದರು. ಫಾತಿಮಾ ನಧಾಪ,ವಿಜಯಲಕ್ಷ್ಮೀ  ಬಂಡಿವಡ್ಡರ ,ಜ್ಯೋತಿ ಗೌಡರ ವಿದ್ಯಾಥಿ೯ನಿಯರು ಪ್ರಾಥಿ೯ಸಿದರು.     

       

 *ವರದಿ : ಅಮರೇಶ .ಗೊರಚಿಕ್ಕನವರ*

Image Description

Post a Comment

0 Comments