*ಸ್ವರಾಕ್ಷರ ಕವನ*
*ಗಂಧರ್ವ*
*ಅ*:ಅವನೆಂದರೆ ಗಂಧರ್ವ ಪ್ರಿಯಕರನು
*ಆ*: ಆನಂದದ ಉತ್ಸಾಹದ ಒಲುಮೆಯವನು
*ಇ*: ಇನಿಲ್ಲದಂತೆ ನನ್ನ ಮನವ ಕದ್ದ ಚಂದಿರನು
*ಈ*: ಈರೆಳುಲೋಕದಲ್ಲಿಲ್ಲ ನನ್ನ ಮನದನ್ನನು
*ಉ*:ಉಪಾಯ ಮಾಡಿ ನನ್ನನು ಸೆಳೆ ದೊಯ್ಯುವನು
*ಊ*:ಊರಿಗೆ ಕರೆದೊಯ್ಯುವೆನೆಂದು ಬಾ ಎನ್ನುವನು
*ಋ*:ಋಷಿಯಂತೆ ಬದುಕಿದವನು ಈಗ ಸಂಸಾರಿಯಾಗ ಬಯಸಿರುವನು
*ಎ*:ಎಷ್ಟು ಸಾರಿ ಹೇಳಿದರೂ ಕೇಳದೆ ಪದೇ ಪದೇ ಮನೆಯ ಬಳಿ ಸುಳಿವನು
*ಏ*:ಏನೆಂದು ಹೇಳಲಿ ನನ್ನಲ್ಲೇ ಪ್ರಾಣ ಇಟ್ಟಿರುವನು
*ಐ*:ಐoದ್ರ ಜಾಲದ ವಿದ್ಯೆ ಗೊತ್ತಿರುವಂತೆ ಮೋಡಿ ಮಾಡಿರುವನು
*ಒ*:ಒಬ್ಬನೇ ಇರಲೊಲ್ಲದೆ ಜೊತೆ ಯಾಗಲು ಕಾದಿರುವನು
*ಓ*:ಓ ನನ್ನ ನಲ್ಲನೇ ನೀನು ಆ ದೇವರು ನೀಡಿರುವ ವರನಂತೆ
*ಔ*:ಔಪಚಾರಿಕವಾಗಿಯೂ ನಾನು ಅವನಿಗೆ ಸಹಕರಿಸಿರಲಿಲ್ಲ
*ಅಂ*:ಅಂತ ಗೊತ್ತಿದ್ದರೂ ಬಿಡದೆ ಕಾಡುವನಲ್ಲ
*ಆ:* ಆ:ನಂದ ಮೂಡುತಿದೆ ಮನದಲ್ಲಿ ಇವನಂತಹ ಪ್ರೇಮಿಗಳಿಲ್ಲ ಜಗದಲ್ಲಿ.
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments