"ಇದು ಬದುಕಿನ ನಿತ್ಯಸತ್ಯದ ಕವಿತೆ. ಅನುದಿನದ ಅನುಕ್ಷಣದ ಕಟುವಾಸ್ತವದ ಭಾವಗೀತೆ. ಮೊದಲನೆ ಚರಣದಲಿ ವಿನೋದವಿದೆ. ಎರಡನೆಯ ಚರಣದಲಿ ವಿಷಾದವಿದೆ. ಮೂರನೆಯ ಚರಣದಿ ವಿಕೃತಿಯಿದೆ. ನಾಲ್ಕನೆಯ ಚರಣದಿ ವಿರಾಗವಿದೆ. ಜೀವನದ ನಾಲ್ಕುಭಾವಗಳ ಹನಿ ಹನಿ ಮಿನಿಗವಿತೆಯಿದು. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೆಶ್.ಗುಬ್ಬಿ.
ನಿತ್ಯಸತ್ಯ..!
ಕುಟುಕುವ ಹೆಂಡತಿಗಿಂತ
ಮೊಟಕುವ ಹೆಂಡತಿ ಲೇಸು.!
ಜರಿಯುವ ಮಕ್ಕಳಿಗಿಂತ
ಇರಿಯುವ ಮಕ್ಕಳೆ ಭೇಷು.!
ಕಟಕಿಯಾಡುವ ನೆಂಟರಿಗಿಂತ
ಕಟುಕ ನೆಂಟರೆ ಷಭಾಷು.!
ಅಡಿಗಡಿಗು ನರಳಿಸುವವರ
ನಡುವಿನ ನಂದನಕಿಂತ
ನರಕವಾಸವೇ ಸಲೀಸು.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments