*ನವರಾತ್ರಿ 5ನೇ ದಿನ ಸ್ಕಂದಮಾತೆಗೆ: ಮುಹೂರ್ತ, ಮಂತ್ರ, ಪೂಜೆ ವಿಧಾನ, ಕಥೆ..!*
2023 ರ ಅಕ್ಟೋಬರ್ 19 ರಂದು ನವರಾತ್ರಿ ಹಬ್ಬದ ಐದನೇ ದಿನದ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಸ್ಕಂದಮಾತೆಯ ದಿನವಾಗಿದೆ. ನವರಾತ್ರಿ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸುವುದು ಹೇಗೆ..? ನವರಾತ್ರಿ ಐದನೇ ದಿನ ಸ್ಕಂದಮಾತೆ ದೇವಿಯ ಪೂಜೆಗೆ ಶುಭ ಮುಹೂರ್ತ, ಮಂತ್ರ ಮತ್ತು ಕಥೆ ಹೀಗಿದೆ..
ಶಾರದೀಯ ನವರಾತ್ರಿಯ ಐದನೇ ದಿನವನ್ನು 2023 ರ ಅಕ್ಟೋಬರ್ 19 ರಂದು ಗುರುವಾರ ಆಚರಿಸಲಾಗುವುದು. ಶಾರದೀಯ ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ 5ನೇ ಅವತಾರವಾದ ಸ್ಕಂದಮಾತಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ವ್ಯಕ್ತಿಯ ಶುಭ ಹಾರೈಕೆಗಳು ನೆರವೇರುತ್ತವೆ ಮತ್ತು ಮೋಕ್ಷದ ಮಾರ್ಗವೂ ಪ್ರಾಪ್ತಿಯಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ದುರ್ಗಾ ದೇವಿಯ ಈ ರೂಪ ಕಾರ್ತಿಕೇಯನ ತಾಯಿಯಾದ ಕಾರಣ ದೇವಿಯ ಈ ರೂಪಕ್ಕೆ ಸ್ಕಂದಮಾತೆ ಎಂಬ ಹೆಸರು ಬಂದಿದೆ. ಕಾಶಿ ಖಂಡ, ದೇವಿ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಈಕೆಯ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿದೆ.
*ತಾಯಿ ಸ್ಕಂದಮಾತೆಯ ಸ್ವರೂಪ:*
ತಾಯಿ ಸ್ಕಂದಮಾತಾಳು ಸ್ಕಂದ ಕುಮಾರನಾದ ಭಗವಾನ್ ಕಾರ್ತಿಕೇಯನ ತಾಯಿ. ತಾಯಿಯ ರೂಪದ ಬಗ್ಗೆ ವರ್ಣಿಸುವುದಾದರೆ, ಸ್ಕಂದ ದೇವನು ಸ್ಕಂದಮಾತೆಯ ಮಡಿಲಲ್ಲಿ ಕುಳಿತಿದ್ದಾನೆ. ತಾಯಿ ಸ್ಕಂದಮಾತೆ ಕಮಲದ ಆಸನದ ಮೇಲೆ ಕುಳಿತಿದ್ದಾಳೆ, ಆದ್ದರಿಂದ ಅವಳನ್ನು ಪದ್ಮಾಸನ ದೇವಿ ಎಂದೂ ಕರೆಯುತ್ತಾರೆ. ತಾಯಿ ಸ್ಕಂದಮಾತೆಯನ್ನು ಗೌರಿ, ಮಹೇಶ್ವರಿ, ಪಾರ್ವತಿ ಮತ್ತು ಉಮಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ತಾಯಿಯ ವಾಹನ ಸಿಂಹ. ತಾಯಿಯನ್ನು ಪೂಜಿಸುವುದರಿಂದ ಸಂತಾನ ಭಾಗ್ಯ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.
*ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ಮುಹೂರ್ತ*
ಬ್ರಹ್ಮ ಮುಹೂರ್ತ- ಮುಂಜಾನೆ 04:43 ರಿಂದ ಮುಂಜಾನೆ 05:34
ಬೆಳಿಗ್ಗೆ ಮುಹೂರ್ತ- ಮುಂಜಾನೆ 05:08 ರಿಂದ ಬೆಳಗ್ಗೆ 06:24
ಅಭಿಜಿತ್ ಮುಹೂರ್ತ- ಬೆಳಗ್ಗೆ11:43 ರಿಂದ ಮಧ್ಯಾಹ್ನ12:29
ವಿಜಯ ಮುಹೂರ್ತ- ಮಧ್ಯಾಹ್ನ 02:00 ರಿಂದ ಮಧ್ಯಾಹ್ನ 02:45
ಸಂಧ್ಯಾ ಮುಹೂರ್ತ- ಸಂಜೆ 05:48 ರಿಂದ 06:13
ಸಂಜೆ ಮುಹೂರ್ತ- ಸಂಜೆ 05:48 ರಿಂದ ಸಂಜೆ 07:04
ಅಮೃತ ಕಾಲ- ಮಧ್ಯಾಹ್ನ12:14 ರಿಂದ ಮಧ್ಯಾಹ್ನ 01:51
*ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ವಿಧಾನ*
- ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ.
- ಗಂಗಾಜಲದಿಂದ ದೇವಿಯ ವಿಗ್ರಹಕ್ಕೆ ಅಭಿಷೇಕ ಮಾಡಿ.
- ಅಭಿಷೇಕದ ನಂತರ ಹೂವುಗಳನ್ನು ಅರ್ಪಿಸಿ.
- ಹಾಗೆಯೇ ತಾಯಿಗೆ ಕುಂಕುಮವನ್ನು ಹಚ್ಚಿ.
- ತಾಯಿಗೆ ಸಿಹಿ ಖಾದ್ಯವನ್ನು ಮತ್ತು ಐದು ಬಗೆಯ ಹಣ್ಣುಗಳನ್ನು ಅರ್ಪಿಸಿ.
- ಸಾಧ್ಯವಾದಷ್ಟು ತಾಯಿ ಸ್ಕಂದಮಾತೆಯನ್ನು ಧ್ಯಾನಿಸಿ.
- ತಾಯಿಗೆ ಮರೆಯದೆ ಆರತಿಯನ್ನು ಮಾಡಿ.
*ತಾಯಿ ಸ್ಕಂದಮಾತೆಯ ನೆಚ್ಚಿನ ಬಣ್ಣ, ಹೂವು ಮತ್ತು ಭೋಗ*
ತಾಯಿ ಸ್ಕಂದಮಾತೆಯ ನೆಚ್ಚಿನ ಬಣ್ಣ, ಹೂವು ಮತ್ತು ಭೋಗ
ದುರ್ಗಾ ದೇವಿಯ ಸ್ಕಂದಮಾತೆ ರೂಪದ ಆರಾಧನೆಯಿಂದ ಒಬ್ಬನು ಅಂತಿಮ ಶಾಂತಿ ಮತ್ತು ಸಂತೋಷವನ್ನು ಅನುಭವಿಸುತ್ತಾನೆ. ತಾಯಿ ಸ್ಕಂದಮಾತೆಗೆ ಬಿಳಿ ಬಣ್ಣ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ನೀವು ಸ್ಕಂದ ಮಾತೆಯನ್ನು ಮೆಚ್ಚಿಸಲು ಬಯಸಿದರೆ, ಆಕೆಯನ್ನು ಪೂಜಿಸುವ ಸಮಯದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ದಿನ ನೀವು ಸ್ಕಂದಮಾತೆಗೆ ಬಾಳೆಹಣ್ಣುಗಳನ್ನು ಅರ್ಪಿಸಬೇಕು. ಹಾಗೂ ಖೀರ್ನ್ನು ನೈವೇದ್ಯವಾಗಿ ನೀಡಬೇಕು.
*ಸ್ಕಂದಮಾತೆ ಮಂತ್ರ*
- ''ಯಾ ದೇವೀ ಸರ್ವಭೂತೇಷು ಮಾ ಸ್ಕಂದಮಾತಾ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||''
- ''ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ''
- ''ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕತದ್ವಯಾ|
ಶುಭದಾಸ್ತು ಸದಾ Idbi ಸ್ಕಂದಮಾತಾ ಯಶಸ್ವಿನಿ||
ಓಂ ದೇವಿ ಸ್ಕಂದಮಾತಾಯೈ ನಮಃ''
*'ಸ್ಕಂದಮಾತೆ ಕಥೆ"*
ಸಂಕ್ಷಿಪ್ತ
ICC ವಿಶ್ವಕಪ್
ಸುದ್ದಿ
ನಗರ
ವಾಣಿಜ್ಯ
ಸಿನಿಮಾ
ಜೀವನ ಶೈಲಿ
ಜ್ಯೋತಿಷ್ಯ
ದಸರಾ 2023
ಬಿಗ್ಬಾಸ್
ವೆಬ್ ಸ್ಟೋರಿ
ಕೊರೊನಾ
ವಿಡಿಯೋ
ಟಿವಿ
ಕ್ರೀಡೆ
ಫೋಟೋ ಗ್ಯಾಲರಿ
ಹಿಂದೂ ಧರ್ಮ
ಪೂಜಾ ವಿಧಿಗಳು
ಮೂಢನಂಬಿಕೆ
ದೇವಾಲಯಗಳು
Kannada NewsReligionFestivalsNavratri 2023 5th Day Skandamata Puja Muhurat, Puja Vidhi, Mantra And Story
Navratri 2023 5th Day: ನವರಾತ್ರಿ 5ನೇ ದಿನ ಸ್ಕಂದಮಾತೆಗೆ: ಮುಹೂರ್ತ, ಮಂತ್ರ, ಪೂಜೆ ವಿಧಾನ, ಕಥೆ..!
October 2023 Navratri: 2023 ರ ಅಕ್ಟೋಬರ್ 19 ರಂದು ನವರಾತ್ರಿ ಹಬ್ಬದ ಐದನೇ ದಿನದ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಸ್ಕಂದಮಾತೆಯ ದಿನವಾಗಿದೆ. ನವರಾತ್ರಿ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸುವುದು ಹೇಗೆ..? ನವರಾತ್ರಿ ಐದನೇ ದಿನ ಸ್ಕಂದಮಾತೆ ದೇವಿಯ ಪೂಜೆಗೆ ಶುಭ ಮುಹೂರ್ತ, ಮಂತ್ರ ಮತ್ತು ಕಥೆ ಹೀಗಿದೆ..
Authored By ಮನಿಷಾ ಆನಂದ | Vijaya Karnataka Web | Updated: 18 Oct 2023, 5:44 pm
ಶಾರದೀಯ ನವರಾತ್ರಿಯ ಐದನೇ ದಿನವನ್ನು 2023 ರ ಅಕ್ಟೋಬರ್ 19 ರಂದು ಗುರುವಾರ ಆಚರಿಸಲಾಗುವುದು. ಶಾರದೀಯ ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ 5ನೇ ಅವತಾರವಾದ ಸ್ಕಂದಮಾತಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ವ್ಯಕ್ತಿಯ ಶುಭ ಹಾರೈಕೆಗಳು ನೆರವೇರುತ್ತವೆ ಮತ್ತು ಮೋಕ್ಷದ ಮಾರ್ಗವೂ ಪ್ರಾಪ್ತಿಯಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ದುರ್ಗಾ ದೇವಿಯ ಈ ರೂಪ ಕಾರ್ತಿಕೇಯನ ತಾಯಿಯಾದ ಕಾರಣ ದೇವಿಯ ಈ ರೂಪಕ್ಕೆ ಸ್ಕಂದಮಾತೆ ಎಂಬ ಹೆಸರು ಬಂದಿದೆ. ಕಾಶಿ ಖಂಡ, ದೇವಿ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಈಕೆಯ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿದೆ.
ADVT: ಹೆಚ್ಚು ಮಾರಾಟವಾಗುವ ಹೆಡ್ಫೋನ್ಗಳ ಮೇಲೆ 75% ವರೆಗೆ ರಿಯಾಯಿತಿ, ಆಫರ್ ಮಿಸ್ ಮಾಡಬೇಡಿ!
navratri 2023 5th day skandamata puja muhurat puja vidhi mantra and story
Navratri 2023 5th Day: ನವರಾತ್ರಿ 5ನೇ ದಿನ ಸ್ಕಂದಮಾತೆಗೆ: ಮುಹೂರ್ತ, ಮಂತ್ರ, ಪೂಜೆ ವಿಧಾನ, ಕಥೆ..!
ತಾಯಿ ಸ್ಕಂದಮಾತೆಯ ಸ್ವರೂಪ:
ತಾಯಿ ಸ್ಕಂದಮಾತೆಯ ಸ್ವರೂಪ:
ತಾಯಿ ಸ್ಕಂದಮಾತಾಳು ಸ್ಕಂದ ಕುಮಾರನಾದ ಭಗವಾನ್ ಕಾರ್ತಿಕೇಯನ ತಾಯಿ. ತಾಯಿಯ ರೂಪದ ಬಗ್ಗೆ ವರ್ಣಿಸುವುದಾದರೆ, ಸ್ಕಂದ ದೇವನು ಸ್ಕಂದಮಾತೆಯ ಮಡಿಲಲ್ಲಿ ಕುಳಿತಿದ್ದಾನೆ. ತಾಯಿ ಸ್ಕಂದಮಾತೆ ಕಮಲದ ಆಸನದ ಮೇಲೆ ಕುಳಿತಿದ್ದಾಳೆ, ಆದ್ದರಿಂದ ಅವಳನ್ನು ಪದ್ಮಾಸನ ದೇವಿ ಎಂದೂ ಕರೆಯುತ್ತಾರೆ. ತಾಯಿ ಸ್ಕಂದಮಾತೆಯನ್ನು ಗೌರಿ, ಮಹೇಶ್ವರಿ, ಪಾರ್ವತಿ ಮತ್ತು ಉಮಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ತಾಯಿಯ ವಾಹನ ಸಿಂಹ. ತಾಯಿಯನ್ನು ಪೂಜಿಸುವುದರಿಂದ ಸಂತಾನ ಭಾಗ್ಯ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.
Abhimanyu: ಕಣ್ಮುಂದೆ ಅಭಿಮನ್ಯು ಸಾಯುತ್ತಿದ್ದರೂ ಶ್ರೀಕೃಷ್ಣನೇಕೆ ಕಾಪಾಡಲಿಲ್ಲ..?
ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ಮುಹೂರ್ತ
ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ಮುಹೂರ್ತ
ಬ್ರಹ್ಮ ಮುಹೂರ್ತ- ಮುಂಜಾನೆ 04:43 ರಿಂದ ಮುಂಜಾನೆ 05:34
ಬೆಳಿಗ್ಗೆ ಮುಹೂರ್ತ- ಮುಂಜಾನೆ 05:08 ರಿಂದ ಬೆಳಗ್ಗೆ 06:24
ಅಭಿಜಿತ್ ಮುಹೂರ್ತ- ಬೆಳಗ್ಗೆ11:43 ರಿಂದ ಮಧ್ಯಾಹ್ನ12:29
ವಿಜಯ ಮುಹೂರ್ತ- ಮಧ್ಯಾಹ್ನ 02:00 ರಿಂದ ಮಧ್ಯಾಹ್ನ 02:45
ಸಂಧ್ಯಾ ಮುಹೂರ್ತ- ಸಂಜೆ 05:48 ರಿಂದ 06:13
ಸಂಜೆ ಮುಹೂರ್ತ- ಸಂಜೆ 05:48 ರಿಂದ ಸಂಜೆ 07:04
ಅಮೃತ ಕಾಲ- ಮಧ್ಯಾಹ್ನ12:14 ರಿಂದ ಮಧ್ಯಾಹ್ನ 01:51
ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ವಿಧಾನ
ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ವಿಧಾನ
- ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ.
- ಗಂಗಾಜಲದಿಂದ ದೇವಿಯ ವಿಗ್ರಹಕ್ಕೆ ಅಭಿಷೇಕ ಮಾಡಿ.
- ಅಭಿಷೇಕದ ನಂತರ ಹೂವುಗಳನ್ನು ಅರ್ಪಿಸಿ.
- ಹಾಗೆಯೇ ತಾಯಿಗೆ ಕುಂಕುಮವನ್ನು ಹಚ್ಚಿ.
- ತಾಯಿಗೆ ಸಿಹಿ ಖಾದ್ಯವನ್ನು ಮತ್ತು ಐದು ಬಗೆಯ ಹಣ್ಣುಗಳನ್ನು ಅರ್ಪಿಸಿ.
- ಸಾಧ್ಯವಾದಷ್ಟು ತಾಯಿ ಸ್ಕಂದಮಾತೆಯನ್ನು ಧ್ಯಾನಿಸಿ.
- ತಾಯಿಗೆ ಮರೆಯದೆ ಆರತಿಯನ್ನು ಮಾಡಿ.
Navratri 2023: ನವರಾತ್ರಿಯಲ್ಲಿ ಮಗು ಜನಿಸಿದರೆ ಕುಟುಂಬದಲ್ಲಿ ಹೀಗೆಲ್ಲಾ ಆಗುತ್ತೆ..!
ತಾಯಿ ಸ್ಕಂದಮಾತೆಯ ನೆಚ್ಚಿನ ಬಣ್ಣ, ಹೂವು ಮತ್ತು ಭೋಗ
ತಾಯಿ ಸ್ಕಂದಮಾತೆಯ ನೆಚ್ಚಿನ ಬಣ್ಣ, ಹೂವು ಮತ್ತು ಭೋಗ
ದುರ್ಗಾ ದೇವಿಯ ಸ್ಕಂದಮಾತೆ ರೂಪದ ಆರಾಧನೆಯಿಂದ ಒಬ್ಬನು ಅಂತಿಮ ಶಾಂತಿ ಮತ್ತು ಸಂತೋಷವನ್ನು ಅನುಭವಿಸುತ್ತಾನೆ. ತಾಯಿ ಸ್ಕಂದಮಾತೆಗೆ ಬಿಳಿ ಬಣ್ಣ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ನೀವು ಸ್ಕಂದ ಮಾತೆಯನ್ನು ಮೆಚ್ಚಿಸಲು ಬಯಸಿದರೆ, ಆಕೆಯನ್ನು ಪೂಜಿಸುವ ಸಮಯದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ದಿನ ನೀವು ಸ್ಕಂದಮಾತೆಗೆ ಬಾಳೆಹಣ್ಣುಗಳನ್ನು ಅರ್ಪಿಸಬೇಕು. ಹಾಗೂ ಖೀರ್ನ್ನು ನೈವೇದ್ಯವಾಗಿ ನೀಡಬೇಕು.
PC: Pixabay
ಸ್ಕಂದಮಾತೆ ಮಂತ್ರ
ಸ್ಕಂದಮಾತೆ ಮಂತ್ರ
- ''ಯಾ ದೇವೀ ಸರ್ವಭೂತೇಷು ಮಾ ಸ್ಕಂದಮಾತಾ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||''
- ''ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ''
- ''ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕತದ್ವಯಾ|
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ||
ಓಂ ದೇವಿ ಸ್ಕಂದಮಾತಾಯೈ ನಮಃ''
Navratri 2023: ದುರ್ಗೆಯ ಕೈಯಲ್ಲಿನ 8 ಆಯುಧಗಳು 8 ಜೀವನ ಪಾಠವನ್ನು ಹೇಳುತ್ತೆ.!
ಸ್ಕಂದಮಾತೆ ಕಥೆ
ಸ್ಕಂದಮಾತೆ ಕಥೆ
ಪೌರಾಣಿಕ ನಂಬಿಕೆಯ ಪ್ರಕಾರ, ತಾರಕಾಸುರನೆಂಬ ರಾಕ್ಷಸನು ಬ್ರಹ್ಮ ದೇವನನ್ನು ಕುರಿತು ಕಠಿಣ ತಪಸ್ಸನ್ನು ಮಾಡಿ, ಆತನಿಂದ ಅಮರತ್ವದ ವರವನ್ನು ಪಡೆದುಕೊಂಡನು. ವರವನ್ನು ದಯಪಾಲಿಸಿದ ನಂತರ ಬ್ರಹ್ಮದೇವನು ಸಾವು ಪ್ರತಿಯೊಬ್ಬ ವ್ಯಕ್ತಿಗೂ ಖಚಿತ ಎಂಬುದರ ಸತ್ಯವನ್ನು ತಿಳಿಸುತ್ತಾನೆ. ಇದರ ಬಳಿಕ ಅವನು ಶಿವನು ಎಂದಿಗೂ ಮದುವೆಯಾಗಲಾರ ಎಂದು ಯೋಚಿಸಿ ತಾನು ಸಾಯುವುದಾದರೆ ಶಿವನ ಮಗನಿಂದಲೇ ಸಾಯಬೇಕು ಅಂತಹ ವರವನ್ನು ನೀಡಿ ಎಂದು ಕೇಳುತ್ತಾನೆ. ಬ್ರಹ್ಮನು ನಗುತ್ತಾ ಇದಕ್ಕೆ ಒಪ್ಪಿಕೊಳ್ಳುತ್ತಾನೆ. ವರವನ್ನು ಪಡೆದುಕೊಂಡ ಅಹಂಕಾರದಿಂದ ತಾರಕಾಸುರನು ಜನರನ್ನು ಹಿಂಸಿಸಲು ಪ್ರಾರಂಭಿಸುತ್ತಾನೆ. ಆ ಸಂದರ್ಭದಲ್ಲಿ ಜನರು ಶಿವನ ಬಳಿ ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ. ನಂತರ ಶಿವ ಪಾರ್ವತಿ ವಿವಾಹ ನಡೆಯುತ್ತದೆ. ಇವರಿಬ್ಬರಿಗೆ ಜನಿಸಿದ ಮಗನಾದ ಕಾರ್ತಿಕೇಯನಿಂದ ತಾರಕಾಸುರನ ಸಂಹಾರವಾಗುತ್ತದೆ. ಈ ಕಾರಣದಿಂದ ದೇವಿಯನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ.
ಶುಭೋಧಯ
ಸಂಜಯ ಎಸ್ ಗುರವ
ಕರ್ನಾಟಕ ರಾಜ್ಯ ಉಪಾಧ್ಯಕ್ಷರು
ರಾಷ್ಟ್ರೀಯ ಗುರವ ಸಮಾಜ ಮಹಾಸಂಘ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments