*ಯುಗಾದಿ ಹಬ್ಬದ ಆಶಯ*
ಈ ಪರಾಭವ ವತ್ಸರವು ಬಲು
ಕೋಪ ತಾಪಗಳನ್ನು ಮಣಿಸಲಿ
ದೀಪದೊಲು ಬೆಳಕನ್ನು ಚೆಲ್ಲಲಿ ತೋಷ ಹೆಚ್ಚಿಸಲಿ|
ಭೂಪರಲಿ ಕೊಳಗುಳದ ಬಯಕೆಯ
ಲೋಪಗೈದು ಯುಗಾದಿ ಮನಸಿನ
ವೈಪರೀತ್ಯಗಳನ್ನು ತೊಲಗಿಸಿ ನೆಮ್ಮದಿಯ ತರಲಿ||೧೭೬||
[ ಭಾಮಿನೀಷಟ್ಪದಿ ]
{ ವತ್ಸರ= ವರ್ಷ; ಭೂಪರು= ಅರಸರು; ಕೊಳಗುಳ= ಯುದ್ಧ }
*ಕಿಗ್ಗಾಲು ಎಸ್ ಗಿರೀಶ್*
೧೯-೦೩-೨೦೨೬

.gif)

.gif)


0 Comments