ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರ ಇವರು ಕೊಡ ಮಾಡುವ ರಾಜ್ಯಮಟ್ಟದ ಜ್ಯೋತಿಬಾಪುಲೆ ಉತ್ತಮ ಎಸ್ಡಿಎಂಸಿ ಅಧ್ಯಕ್ಷ ಪ್ರಶಸ್ತಿಗೆ ಸರ್ಕಾರಿ ಪ್ರೌಢಶಾಲೆ ಹತ್ತಳ್ಳಿಯ ಅಧ್ಯಕ್ಷರಾದ ಶ್ರೀ ಶ್ರೀಮಂತ ಬಿರಾದಾರ್ ಇವರು ಆಯ್ಕೆಯಾಗಿದ್ದಾರೆ.ಈ ಪ್ರಶಸ್ತಿಯು ಜನವರಿ 21 ,1,2024 ರಂದು ವಿಜಯಪುರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಭಾಭವನ ತೊರವಿಯಲ್ಲಿ ನಡೆಯುವ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿ.ಎಸ್. ಕಾಂಬ್ಳೆ. ಅಧ್ಯಕ್ಷರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರ ಹಾಗೂ ಶ್ರೀ ರಮೇಶ್ ನಾಯಕ್ ಕಾರ್ಯದರ್ಶಿಗಳು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರ ಇವರು ಪತ್ರಿಕಾ ಹೇಳಿಕೆಗೆ ತಿಳಿಸಿದ್ದಾರೆ
ಶ್ರೀ ಶ್ರೀಮಂತ ಬಿರಾದಾರ್ ಇವರು ಆಯ್ಕೆಗೆ ಸರ್ಕಾರಿ ಪ್ರೌಢಶಾಲೆ ಹತ್ತಳಿಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಎಸ್ಡಿಎಂಸಿಯ ಎಲ್ಲ ಸದಸ್ಯ ಬಳಗದವರು ಹಾಗೂ ಊರಿನ ಹಿರಿಯರು ಶುಭ ಹಾರೈಸಿದ್ದಾರೆ.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments