*ರಾಯಬಾಗ:* ನಮ್ಮದು ಕೃಷಿ ಪ್ರಧಾನ ದೇಶ. ಇಲ್ಲಿನ ಪ್ರತಿಯೊಂದು ರಾಜ್ಯಗಳು ಒಂದೊಂದು ಬೆಳೆಗೆ ಹೆಸರುವಾಸಿಯಾಗಿವೆ. ನಮ್ಮ ಕರ್ನಾಟಕ ರಾಜ್ಯ ನೆರೆಯ ಮಹಾರಾಷ್ಟ್ರ ರಾಜ್ಯ ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿಯೂ ಹೇರಳವಾಗಿ ಕಬ್ಬು ಬೆಳೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆ ಬಿಟ್ಟರೆ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಅತೀ ಹೆಚ್ಚು ಕಬ್ಬು ಬೆಳೆ ಬೆಳೆಯುತ್ತಾರೆ. ಹೀಗಾಗಿ ಮಂಡ್ಯ ಹಾಗೂ ಬೆಳಗಾವಿ ಈ ಉಭಯ ಜಿಲ್ಲೆಗಳು "ಸಕ್ಕರೆ ಜಿಲ್ಲೆಗಳು" ಎಂದು ವಿಖ್ಯಾತಿ ಪಡೆದಿವೆ.
ಸಮೃದ್ಧ ನೀರಾವರಿ ಪ್ರದೇಶವಾದ ಬೆಳಗಾವಿ ಜಿಲ್ಲೆಯಲ್ಲಿ 100 ಕ್ಕೆ 90 ರಷ್ಟು ರೈತರು ವಾಣಿಜ್ಯ ಬೆಳೆಯಾದ ಕಬ್ಬನ್ನು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಸಣ್ಣ ಪ್ರಮಾಣದ ಹಾಗೂ ಪ್ರಗತಿಪರ ರೈತರು ಕಬ್ಬು ಬೆಳೆಯನ್ನೇ ನಂಬಿ ಈಗ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ನಾಟಿ ಆರಂಭದಿಂದ ಹಿಡಿದು ಕಾರ್ಖಾನೆಗಳಿಗೆ ಕಬ್ಬು ಸಾಗಿಸುವವರೆಗೆ ಪ್ರತಿಯೊಬ್ಬ ಕಬ್ಬು ಬೆಳೆಗಾರ ಒಂದು ಎಕರೆಗೆ 53 ಸಾವಿರ 500 ರೂಪಾಯಿಯಷ್ಟು ಖರ್ಚು ಮಾಡುತ್ತಾನೆ. ಕಬ್ಬು ಬೆಳೆಯಲು ಭೂಮಿಯನ್ನು ಸಿದ್ಧಗೊಳಿಸಲು ಗಳೆ, ರೂಟರ್,ಲಂಗರಿ, ಬೆಲೆಗಳು ಈಗ ತೀವ್ರ ಏರಿಕೆ ಕಂಡಿವೆ. ಬೀಜ ಔಷದೋಪಚಾರದ ವಸ್ತುಗಳ ಬೆಲೆಗಳು ಮಾರುಕಟ್ಟೆಯಲ್ಲಿ ಇಮ್ಮಡಿಯಾಗಿದ್ದು, ರೈತರನ್ನು ತೀವ್ರ ಚಿಂತೆಗೀಡು ಮಾಡಿವೆ.
ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಮುಖಿಯಾಗಿದ್ದು, ರೈತರ ನೆಮ್ಮದಿಯನ್ನೇ ಕಸಿದುಕೊಂಡಿದ್ದು ಸ್ಪಟಿಕ ಸ್ಪಷ್ಟ. ಈ ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಪ್ರತಿವರ್ಷ ಏರುತ್ತವೆ, ಆದರೆ ಕಬ್ಬು ಬೆಳೆಗೆ ಈವರೆಗೂ ಸರಿಯಾದ ನ್ಯಾಯಯುತವಾದ ಬೆಲೆ ಏರಿಕೆಯಾಗದೇ ಇರುವುದು ಕಬ್ಬು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕಬ್ಬು ಬೆಳೆದು ಲೋಕಕ್ಕೆ ಸಿಹಿ ನೀಡುವ ಈ ರೈತ ಮಾತ್ರ ಕಹಿ ಕ್ಷಣಗಳನ್ನೇ ಅನುಭವಿಸುತ್ತಿರುವುದು ವಿಪರ್ಯಾಸ.
ಕಬ್ಬು ಬೆಳೆಯುವ ರೈತ ಚಿಂತೆಯ ಮೂಟೆ ಹೊತ್ತುಕೊಂಡು ನಿರುತ್ಸಾಹಿಯಾಗಿ ಸಾಲದ ಭಾದೆಯಿಂದ ಕಂಗಾಲಾಗಿ ಅತ್ಯಂತ ದುಸ್ತರ ಜೀವನ ನಡೆಸುತ್ತಿದ್ದಾನೆ. ಒಂದು ಕಾಲದಲ್ಲಿ ರೊಕ್ಕದ ಬೆಳೆಯಾಗಿದ್ದ ಇವನಿಗೆ ಇತ್ತೀಚೆಗೆ ದುಃಖದ ಬೆಳೆಯಾಗಿದ್ದು ಮಾತ್ರ ಸಖೇದ ಆಶ್ಚರ್ಯ.
ಪಕ್ಕದ ಮಹಾರಾಷ್ಟ್ರದಲ್ಲಿರುವ ಸಕ್ಕರೆ ಕಾರ್ಖಾನೆಗಳು ಸ್ವಲ್ಪ ಮಟ್ಟಿಗೆ ದರ ಏರಿಕೆ ಮಾಡಿವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಪ್ರತಿ ಬಾರಿ ಹಂಗಾಮು ಆರಂಭದಲ್ಲಿ ಸೂಕ್ತ ನ್ಯಾಯಸಮ್ಮತ ಬೆಲೆ ನಿರ್ಧಾರ ಮಾಡದೇ ಇರುವುದು ಕಬ್ಬು ಬೆಳೆಗಾರರು ನಿರಾಸೆಯ ಕಡಲಲ್ಲಿ ತೇಲುತ್ತಿದ್ದಾರೆ.
ಸರಿಯಾದ ಅವಧಿಗೆ ಕಬ್ಬು ಖರೀದಿಸಬೇಕಾದ ಕಾರ್ಖಾನೆಗಳು ಹಲವು ಬಾರಿ ಒಂದೆಡೆ 18 ತಿಂಗಳು ಗತಿಸಿದ್ದರೂ ಕಬ್ಬು ಕಟಾವಿಗೆ ಆದೇಶ ಮಾಡದೇ ಇರುವುದು,ಹಾಗೂ ಕಬ್ಬು ಕಟಾವು ಮಾಡಲು ಪ್ರತಿ ವರ್ಷ ತೋಡ್ನಿ ಗ್ಯಾಂಗ್ ದವರು ಮನ ಬಂದಂತೆ ಸಾಗಾಣಿಕೆ ದರ ಏರಿಕೆ ಮಾಡುತ್ತ ಅಮಾಯಕ ರೈತರಲ್ಲಿ ಹಣ ವಸೂಲಿ ಮಾಡುತ್ತಿರುವುದು ರೈತರನ್ನು ನಿದ್ದೆಗೆಡಿಸಿದೆ. ನಿಯತ್ತಿಗೆ ಹೆಸರಾದ ರೈತರು ಎಂದೆಂದಿಗೂ ಯಾರಿಗೂ ಅನ್ಯಾಯ ಮಾಡಲಾರರು. ಆದರೆ ಕಾರ್ಖಾನೆಗಳಿಗೆ ಕಬ್ಬು ಕಳಿಸುವ ಸಂದರ್ಭದಲ್ಲಿ ತೂಕ ಮಾಡದೇ ಹಾಗೆಯೇ ಕಳಿಸುತ್ತಾರೆ. ಆದರೆ ಕಾರ್ಖಾನೆಯಲ್ಲಿ ನಡೆಯುವ ತೂಕದಲ್ಲಿ ಪ್ರತಿ ವರ್ಷ ವ್ಯತ್ಯಾಸ ಕಂಡುಬರುತ್ತದೆ. ಇತ್ತೀಚೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ದರ ವಂಚನೆ ತಡೆಗಟ್ಟಲು ಅನುಷ್ಠಾನ ಸಮಿತಿಗಳನ್ನು ರಚಿಸಿ ತೂಕ ವಂಚನೆಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿರುವುದು ರೈತ ವಲಯದಲ್ಲಿ ಕೊಂಚ ಸಂತಸ ಮೂಡಿದೆ.
ರೈತನ ಬೆವರು ಕಣ್ಣೀರು ಕುಡಿಯುತ್ತಿರುವ ಕಬ್ಬು ಬೆಳೆಗಾರರನ್ನು ರುಬ್ಬುತ್ತಿರುವ ಗಬ್ಬುಬ್ಬಿದ ಸಕ್ಕರೆ ಉದ್ದಿಮೆಗಳಿಗೆ ಸೂಕ್ತ ಲಗಾಮು ಹಾಕಿ ನಿಯಂತ್ರಣ ಮಾಡಬೇಕಾದ ಸರಕಾರ, ಈಗ ಕೈಕಟ್ಟಿ ಕುಳಿತಿರುವುದು ಅತ್ಯಂತ ವಿಷಾದನೀಯ.
ಈ ಬಾರಿ ಮಳೆಯ ತೀವ್ರ ಅಭಾವದಿಂದ ಉತ್ಪಾದನೆ ಜೊತೆಗೆ ಇಳುವರಿಯೂ ಕುಂಠಿತವಾಗಿದೆ. ಕಬ್ಬಿನ ದರ ಚಿಂತೆಯಲ್ಲಿಯೇ ರೈತ ಆತಂಕದಿಂದ ದಿನದೂಡುತ್ತಿದ್ದಾನೆ. ರೈತ ಪರ ಕಾಳಜಿಯನ್ನು ಮೇಲ್ನೋಟಕ್ಕೆ ತೋರಿಸಿ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ನಮ್ಮ ಜನಪ್ರತಿನಿಧಿಗಳು ಮಾತ್ರ ಇವರ ಸಂಕಷ್ಟಗಳನ್ನು ಈವರೆಗೂ ತಾಳ್ಮೆಯಿಂದ ಆಲಿಸದೇ ಇರುವುದು ಈ ಮಣ್ಣಿನ ಮಗನ ಕಣ್ಣೀರಿನ ಕತೆ ಮಾತ್ರ ನಿಜಕ್ಕೂ ದುರಂತವಾಗಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಒಡೆತನದಲ್ಲಿಯೇ ಇರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಇಲ್ಲಿಯವರೆಗೆ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಿವೆಯೆ? ಕಬ್ಬು ಬೆಳೆಯಿಂದ ಆರ್ಥಿಕವಾಗಿ ಜೀವನ ಮಟ್ಟ ಸುಧಾರಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕಾಗಿದ್ದ "ಕಬ್ಬು ಬೆಳೆಗಾರರ ಪಾಲಿಗೆ ಕಬ್ಬು ಡೊಂಕು ಸಿಹಿಯೂ ಡೊಂಕು" ಆಗಿದ್ದು ಅಕ್ಷರಶಃ ಸತ್ಯವಾಗಿದೆ. 2023~ 24 ನೇ ಕಬ್ಬು ನುರಿಸುವ ಹಂಗಾಮು ನವೆಂಬರ 1 ರ ನಂತರ ಆರಂಭಗೊಳ್ಳಲಿವೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದಾರೆ. ಪ್ರಸ್ತುತ ಸಕ್ಕರೆ ಕಾರ್ಖಾನೆಗಳು ಘೋಷಣೆ ಮಾಡಿದ ಎಫ್ .ಆರ್.ಪಿ.ಬೆಲೆಗಿಂತ ಹೆಚ್ಚಿನ ದರ ನೀಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಈ ಆದೇಶ ನಿಯಮಗಳು ಕಾಗದದಲ್ಲಿ ಕಂಗೊಳಿಸದೇ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಃಪೂರ್ವಕವಾಗಿ ಏಕತ್ರಯಗೊಂಡು ಅನುಷ್ಠಾನದ ರೂಪದಲ್ಲಿ ಘರ್ಜಿಸಿದರೆ ಮಾತ್ರ ರೈತರ ಹಿತ ಕಾಪಾಡಲು ಸಾಧ್ಯವಾದೀತು.! ನೇಗಿಲಯೋಗಿಯ ಸುಖ ಸಂತೋಷ ಕಸಿದುಕೊಂಡ ಆಳುವ ಸರಕಾರಗಳು ಕಬ್ಬು ಬೆಳೆಗಾರರ ಈ ಕಟು ವಾಸ್ತವ ಕತೆಗೆ ಇತಿಶ್ರೀ ಹಾಡುವುದು ಯಾವಾಗ?? ಕಾಲವೇ ನಿರ್ಧರಿಸಬೇಕು
*ಲೇಖನ:ಡಾ.ಜಯವೀರ ಎ.ಕೆ*
【 ಕನ್ನಡ ಪ್ರಾಧ್ಯಾಪಕರು】
ಕೆ.ಎಲ್.ಇ. ಪದವಿ ಮಹಾವಿದ್ಯಾಲಯ
ಶಿರಗುಪ್ಪಿ ಕಟು ವಾಸ್ತವ ಕತೆ*
*ರಾಯಬಾಗ:* ನಮ್ಮದು ಕೃಷಿ ಪ್ರಧಾನ ದೇಶ. ಇಲ್ಲಿನ ಪ್ರತಿಯೊಂದು ರಾಜ್ಯಗಳು ಒಂದೊಂದು ಬೆಳೆಗೆ ಹೆಸರುವಾಸಿಯಾಗಿವೆ. ನಮ್ಮ ಕರ್ನಾಟಕ ರಾಜ್ಯ ನೆರೆಯ ಮಹಾರಾಷ್ಟ್ರ ರಾಜ್ಯ ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿಯೂ ಹೇರಳವಾಗಿ ಕಬ್ಬು ಬೆಳೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆ ಬಿಟ್ಟರೆ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಅತೀ ಹೆಚ್ಚು ಕಬ್ಬು ಬೆಳೆ ಬೆಳೆಯುತ್ತಾರೆ. ಹೀಗಾಗಿ ಮಂಡ್ಯ ಹಾಗೂ ಬೆಳಗಾವಿ ಈ ಉಭಯ ಜಿಲ್ಲೆಗಳು "ಸಕ್ಕರೆ ಜಿಲ್ಲೆಗಳು" ಎಂದು ವಿಖ್ಯಾತಿ ಪಡೆದಿವೆ.
ಸಮೃದ್ಧ ನೀರಾವರಿ ಪ್ರದೇಶವಾದ ಬೆಳಗಾವಿ ಜಿಲ್ಲೆಯಲ್ಲಿ 100 ಕ್ಕೆ 90 ರಷ್ಟು ರೈತರು ವಾಣಿಜ್ಯ ಬೆಳೆಯಾದ ಕಬ್ಬನ್ನು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಸಣ್ಣ ಪ್ರಮಾಣದ ಹಾಗೂ ಪ್ರಗತಿಪರ ರೈತರು ಕಬ್ಬು ಬೆಳೆಯನ್ನೇ ನಂಬಿ ಈಗ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ನಾಟಿ ಆರಂಭದಿಂದ ಹಿಡಿದು ಕಾರ್ಖಾನೆಗಳಿಗೆ ಕಬ್ಬು ಸಾಗಿಸುವವರೆಗೆ ಪ್ರತಿಯೊಬ್ಬ ಕಬ್ಬು ಬೆಳೆಗಾರ ಒಂದು ಎಕರೆಗೆ 53 ಸಾವಿರ 500 ರೂಪಾಯಿಯಷ್ಟು ಖರ್ಚು ಮಾಡುತ್ತಾನೆ. ಕಬ್ಬು ಬೆಳೆಯಲು ಭೂಮಿಯನ್ನು ಸಿದ್ಧಗೊಳಿಸಲು ಗಳೆ, ರೂಟರ್,ಲಂಗರಿ, ಬೆಲೆಗಳು ಈಗ ತೀವ್ರ ಏರಿಕೆ ಕಂಡಿವೆ. ಬೀಜ ಔಷದೋಪಚಾರದ ವಸ್ತುಗಳ ಬೆಲೆಗಳು ಮಾರುಕಟ್ಟೆಯಲ್ಲಿ ಇಮ್ಮಡಿಯಾಗಿದ್ದು, ರೈತರನ್ನು ತೀವ್ರ ಚಿಂತೆಗೀಡು ಮಾಡಿವೆ.
ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಮುಖಿಯಾಗಿದ್ದು, ರೈತರ ನೆಮ್ಮದಿಯನ್ನೇ ಕಸಿದುಕೊಂಡಿದ್ದು ಸ್ಪಟಿಕ ಸ್ಪಷ್ಟ. ಈ ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಪ್ರತಿವರ್ಷ ಏರುತ್ತವೆ, ಆದರೆ ಕಬ್ಬು ಬೆಳೆಗೆ ಈವರೆಗೂ ಸರಿಯಾದ ನ್ಯಾಯಯುತವಾದ ಬೆಲೆ ಏರಿಕೆಯಾಗದೇ ಇರುವುದು ಕಬ್ಬು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕಬ್ಬು ಬೆಳೆದು ಲೋಕಕ್ಕೆ ಸಿಹಿ ನೀಡುವ ಈ ರೈತ ಮಾತ್ರ ಕಹಿ ಕ್ಷಣಗಳನ್ನೇ ಅನುಭವಿಸುತ್ತಿರುವುದು ವಿಪರ್ಯಾಸ.
ಕಬ್ಬು ಬೆಳೆಯುವ ರೈತ ಚಿಂತೆಯ ಮೂಟೆ ಹೊತ್ತುಕೊಂಡು ನಿರುತ್ಸಾಹಿಯಾಗಿ ಸಾಲದ ಭಾದೆಯಿಂದ ಕಂಗಾಲಾಗಿ ಅತ್ಯಂತ ದುಸ್ತರ ಜೀವನ ನಡೆಸುತ್ತಿದ್ದಾನೆ. ಒಂದು ಕಾಲದಲ್ಲಿ ರೊಕ್ಕದ ಬೆಳೆಯಾಗಿದ್ದ ಇವನಿಗೆ ಇತ್ತೀಚೆಗೆ ದುಃಖದ ಬೆಳೆಯಾಗಿದ್ದು ಮಾತ್ರ ಸಖೇದ ಆಶ್ಚರ್ಯ.
ಪಕ್ಕದ ಮಹಾರಾಷ್ಟ್ರದಲ್ಲಿರುವ ಸಕ್ಕರೆ ಕಾರ್ಖಾನೆಗಳು ಸ್ವಲ್ಪ ಮಟ್ಟಿಗೆ ದರ ಏರಿಕೆ ಮಾಡಿವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಪ್ರತಿ ಬಾರಿ ಹಂಗಾಮು ಆರಂಭದಲ್ಲಿ ಸೂಕ್ತ ನ್ಯಾಯಸಮ್ಮತ ಬೆಲೆ ನಿರ್ಧಾರ ಮಾಡದೇ ಇರುವುದು ಕಬ್ಬು ಬೆಳೆಗಾರರು ನಿರಾಸೆಯ ಕಡಲಲ್ಲಿ ತೇಲುತ್ತಿದ್ದಾರೆ.
ಸರಿಯಾದ ಅವಧಿಗೆ ಕಬ್ಬು ಖರೀದಿಸಬೇಕಾದ ಕಾರ್ಖಾನೆಗಳು ಹಲವು ಬಾರಿ ಒಂದೆಡೆ 18 ತಿಂಗಳು ಗತಿಸಿದ್ದರೂ ಕಬ್ಬು ಕಟಾವಿಗೆ ಆದೇಶ ಮಾಡದೇ ಇರುವುದು,ಹಾಗೂ ಕಬ್ಬು ಕಟಾವು ಮಾಡಲು ಪ್ರತಿ ವರ್ಷ ತೋಡ್ನಿ ಗ್ಯಾಂಗ್ ದವರು ಮನ ಬಂದಂತೆ ಸಾಗಾಣಿಕೆ ದರ ಏರಿಕೆ ಮಾಡುತ್ತ ಅಮಾಯಕ ರೈತರಲ್ಲಿ ಹಣ ವಸೂಲಿ ಮಾಡುತ್ತಿರುವುದು ರೈತರನ್ನು ನಿದ್ದೆಗೆಡಿಸಿದೆ. ನಿಯತ್ತಿಗೆ ಹೆಸರಾದ ರೈತರು ಎಂದೆಂದಿಗೂ ಯಾರಿಗೂ ಅನ್ಯಾಯ ಮಾಡಲಾರರು. ಆದರೆ ಕಾರ್ಖಾನೆಗಳಿಗೆ ಕಬ್ಬು ಕಳಿಸುವ ಸಂದರ್ಭದಲ್ಲಿ ತೂಕ ಮಾಡದೇ ಹಾಗೆಯೇ ಕಳಿಸುತ್ತಾರೆ. ಆದರೆ ಕಾರ್ಖಾನೆಯಲ್ಲಿ ನಡೆಯುವ ತೂಕದಲ್ಲಿ ಪ್ರತಿ ವರ್ಷ ವ್ಯತ್ಯಾಸ ಕಂಡುಬರುತ್ತದೆ. ಇತ್ತೀಚೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ದರ ವಂಚನೆ ತಡೆಗಟ್ಟಲು ಅನುಷ್ಠಾನ ಸಮಿತಿಗಳನ್ನು ರಚಿಸಿ ತೂಕ ವಂಚನೆಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿರುವುದು ರೈತ ವಲಯದಲ್ಲಿ ಕೊಂಚ ಸಂತಸ ಮೂಡಿದೆ.
ರೈತನ ಬೆವರು ಕಣ್ಣೀರು ಕುಡಿಯುತ್ತಿರುವ ಕಬ್ಬು ಬೆಳೆಗಾರರನ್ನು ರುಬ್ಬುತ್ತಿರುವ ಗಬ್ಬುಬ್ಬಿದ ಸಕ್ಕರೆ ಉದ್ದಿಮೆಗಳಿಗೆ ಸೂಕ್ತ ಲಗಾಮು ಹಾಕಿ ನಿಯಂತ್ರಣ ಮಾಡಬೇಕಾದ ಸರಕಾರ, ಈಗ ಕೈಕಟ್ಟಿ ಕುಳಿತಿರುವುದು ಅತ್ಯಂತ ವಿಷಾದನೀಯ.
ಈ ಬಾರಿ ಮಳೆಯ ತೀವ್ರ ಅಭಾವದಿಂದ ಉತ್ಪಾದನೆ ಜೊತೆಗೆ ಇಳುವರಿಯೂ ಕುಂಠಿತವಾಗಿದೆ. ಕಬ್ಬಿನ ದರ ಚಿಂತೆಯಲ್ಲಿಯೇ ರೈತ ಆತಂಕದಿಂದ ದಿನದೂಡುತ್ತಿದ್ದಾನೆ. ರೈತ ಪರ ಕಾಳಜಿಯನ್ನು ಮೇಲ್ನೋಟಕ್ಕೆ ತೋರಿಸಿ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ನಮ್ಮ ಜನಪ್ರತಿನಿಧಿಗಳು ಮಾತ್ರ ಇವರ ಸಂಕಷ್ಟಗಳನ್ನು ಈವರೆಗೂ ತಾಳ್ಮೆಯಿಂದ ಆಲಿಸದೇ ಇರುವುದು ಈ ಮಣ್ಣಿನ ಮಗನ ಕಣ್ಣೀರಿನ ಕತೆ ಮಾತ್ರ ನಿಜಕ್ಕೂ ದುರಂತವಾಗಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಒಡೆತನದಲ್ಲಿಯೇ ಇರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಇಲ್ಲಿಯವರೆಗೆ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಿವೆಯೆ? ಕಬ್ಬು ಬೆಳೆಯಿಂದ ಆರ್ಥಿಕವಾಗಿ ಜೀವನ ಮಟ್ಟ ಸುಧಾರಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕಾಗಿದ್ದ "ಕಬ್ಬು ಬೆಳೆಗಾರರ ಪಾಲಿಗೆ ಕಬ್ಬು ಡೊಂಕು ಸಿಹಿಯೂ ಡೊಂಕು" ಆಗಿದ್ದು ಅಕ್ಷರಶಃ ಸತ್ಯವಾಗಿದೆ. 2023~ 24 ನೇ ಕಬ್ಬು ನುರಿಸುವ ಹಂಗಾಮು ನವೆಂಬರ 1 ರ ನಂತರ ಆರಂಭಗೊಳ್ಳಲಿವೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದಾರೆ. ಪ್ರಸ್ತುತ ಸಕ್ಕರೆ ಕಾರ್ಖಾನೆಗಳು ಘೋಷಣೆ ಮಾಡಿದ ಎಫ್ .ಆರ್.ಪಿ.ಬೆಲೆಗಿಂತ ಹೆಚ್ಚಿನ ದರ ನೀಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಈ ಆದೇಶ ನಿಯಮಗಳು ಕಾಗದದಲ್ಲಿ ಕಂಗೊಳಿಸದೇ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಃಪೂರ್ವಕವಾಗಿ ಏಕತ್ರಯಗೊಂಡು ಅನುಷ್ಠಾನದ ರೂಪದಲ್ಲಿ ಘರ್ಜಿಸಿದರೆ ಮಾತ್ರ ರೈತರ ಹಿತ ಕಾಪಾಡಲು ಸಾಧ್ಯವಾದೀತು.! ನೇಗಿಲಯೋಗಿಯ ಸುಖ ಸಂತೋಷ ಕಸಿದುಕೊಂಡ ಆಳುವ ಸರಕಾರಗಳು ಕಬ್ಬು ಬೆಳೆಗಾರರ ಈ ಕಟು ವಾಸ್ತವ ಕತೆಗೆ ಇತಿಶ್ರೀ ಹಾಡುವುದು ಯಾವಾಗ?? ಕಾಲವೇ ನಿರ್ಧರಿಸಬೇಕು
*ಲೇಖನ:ಡಾ.ಜಯವೀರ ಎ.ಕೆ*
【 ಕನ್ನಡ ಪ್ರಾಧ್ಯಾಪಕರು】
ಕೆ.ಎಲ್.ಇ. ಪದವಿ ಮಹಾವಿದ್ಯಾಲಯ
ಶಿರಗುಪ್ಪಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments