*ಮಳೆಗೆ ಧರೆ ತಂಪಾಯ್ತು
ಗುಡುಗು ಹಾಗೂ ಸಿಡಿಲುಗಳ ಪಡೆ-
ಯೊಡನೆ ಜಡಿಮಳೆ ನಿನ್ನೆ ಸುರಿಯಲು
ಕೊಡಗು ಜಿಲ್ಲೆಯ ಭೂಮಿ ತಂಪಾಗಿಹುದು ಮಳೆಬಂದು|
ಬಡಿದ ಸಿಡಿಲಿಗೆ ಸಿಲುಕಿ ವಿದ್ಯುತ್
ಕಡಿತಗೊಂಡಿದೆ ದೂರವಾಣಿಗ-
ಳೊಡಲ ಜೀವದ ಮೂಲ ಮುಗಿದಿದೆ ಕರೆಯು ನಿಂತಿಹುದು||
*ಕಿಗ್ಗಾಲು ಎಸ್ ಗಿರೀಶ್*
೨೯-೦೩-೨೦೨೬
0 Comments