* ರಮ್ಮಿ ಆಟವನ್ನು ಗೇಟ್ ಪಾಸ್ ಮಾಡಲು ಬರುತ್ತಿದೆ ರಮ್ಮಿ ಚಿತ್ರತಂಡ *

 ರಮ್ಮಿ ಆಟವನ್ನು ಗೇಟ್ ಪಾಸ್ ಮಾಡಲು ಬರುತ್ತಿದೆ ರಮ್ಮಿ ಚಿತ್ರತಂಡ



ಇಂದು "ರಮ್ಮಿ ಆಟ" ಚಿತ್ರವು ರಾಜ್ಯಾದ್ಯಂತ ಪ್ರದರ್ಶನ


ವರದಿ: ಈಶ್ವರ್ ಸಿರಿಗೇರಿ


ಬೆಂಗಳೂರು: ಸೆ.19: ಇತ್ತೀಚಿನ ದಿನಗಳಲ್ಲಿ ರಮ್ಮಿ ಆಟ / ರಮ್ಮಿ ಗೇಮ್  ಇದೊಂದು ಮನುಕುಲದ ಅವನತಿ, ತಮ್ಮ ಜೀವವನ್ನೇ ಆಹುತಿ ಮಾಡಿಕೊಳ್ಳುತ್ತಿರುವ ಪ್ರಸ್ತುತ ಯುವ ಸಮೂಹದ ಬಗ್ಗೆ  ಉತ್ತಮ ಸಂದೇಶದ  ಕಥೆಯನ್ನುಟ್ಟುಕೊಂಡು, ಆನ್‌ಲೈನ್ ರಮ್ಮಿ ಆಡುವುದರಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ. ಜನ ಸಮೂಹವು ಯಾವೆಲ್ಲಾ ರೀತಿ ಮೋಸ ಹೋಗುತ್ತಾರೆ. ಹಾಗೆಯೇ ಆನ್‌ಲೈನ್‌ ರಮ್ಮಿ ಗೇಮ್‌ ಕುರಿತು ಜನರಿಗೆ ಎಚ್ಚರಿಕೆ ನೀಡುವಂತಹ ಸಿನಿಮಾವೊಂದು ನಾಳೆ ಅಂದರೆ ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಪ್ರದರ್ಶನ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಕನ್ನಡದ ಅಲವು ಸುದ್ದಿ ವಾಹಿನಿಗಳಲ್ಲಿ ನಿರೂಪಕರಾಗಿದ್ದ ರಾಘವ ಸೂರ್ಯ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದು ವಿಶೇಷ. ಈ ಆಟದಿಂದ ಏನೆಲ್ಲ‌ ದುಷ್ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.


ಕನ್ನಡ ಮಾಧ್ಯಮ ಕ್ಷೇತ್ರದಲ್ಲಿನ ತಮ್ಮದೇ ಆದ ಛಾಪು ಮೂಡಿಸಿದ ಖ್ಯಾತ ನಿರೂಪಕರಾಗಿ ಕೆಲಸ ಮಾಡಿದ್ದು ನಂತರದಲ್ಲಿ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ಅವಿಸ್ಮರಣೀಯವಾಗಿದೆ.


ಶ್ರೀ ರಾಘವ ಸೂರ್ಯ ರವರ ನಟನೆಯ 'ರಮ್ಮಿ ಆಟ' ಕನ್ನಡ ಚಲನಚಿತ್ರವು ನಾಳೆ ಅಂದರೆ ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಪ್ರದರ್ಶನ ನೀಡಲಿದೆ.


‘ಇದೇ ಗೇಮ್ ನಿಂದ ಸಾಮಾನ್ಯ ಜನಗಳು ಅದರಲ್ಲೂ ಯುವಕರು ಈ ಆಟವನ್ನು ಆಡಿ ತಮ್ಮ ಜೀವನದ ಎಲ್ಲಾ ಸಂಪಾದನೆಯನ್ನು ಮನೆ ಮಠ ಸಂಸಾರ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲದ ನಿದರ್ಶನಗಳು ಸಾಕಷ್ಟಿವೆ.  ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ, ನಟನಟಿಯರು  ರಮ್ಮಿ ಆಟದ ಬಗ್ಗೆ ಜಾಹೀರಾತುಗಳು ನೀಡುತ್ತಿದ್ದು ಹಲವಾರು ಆನ್ಲೈನ್ ಆಪ್ ಗಳ ಮುಖಾಂತರ ರಮ್ಮಿ ಆಟವನ್ನು  ಉತ್ತೇಜಿಸುತ್ತಿದ್ದು  ಇದರಿಂದ ಮನುಕುಲದ ಮೇಲೆ  ಗಾಢವಾದ ಪರಿಣಾಮ ಬೀರಿದೆ. ಹಾಗೂ ಈ ಆಟದಿಂದಾಗುವ ಪರಿಣಾಮವನ್ನು ಚಿತ್ರದ ಮೂಲಕ ತಿಳಿಸಲು ಹೊಸ ತಂಡವೊಂದು ಹೊರಟಿರುವುದು ಈ ಚಿತ್ರದ ಪ್ರಮುಖ ಉದ್ದೇಶವಾಗಿದೆ.


'ರಮ್ಮಿ ಆಟ' ಕಥೆಯನ್ನು ಉಮರ್ ಷರೀಫ್ ಚಿತ್ರದ ನಿರ್ದೇಶಕರು. ರಮೇಶ್ ಯಾದವ್ ಹಾಗೂ ಹನುಮೇಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ. ಇವತ್ತು ಆನ್‌ಲೈನ್‌ ಜೂಜು ಸಾಕಷ್ಟು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ. ಇಂತಹ ಆಟದ ಅಡ್ಡಪರಿಣಾಮಗಳನ್ನು  ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ವಿಶೇಷ.

ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ನೀಡಿದ್ದು. ನಾಳೆ  ರಾಜ್ಯಾದ್ಯಂತ ಬಿಡುಗಡೆ ಸಕಲ ಸಿದ್ಧತೆ ಮಾಡಿಕೊಂಡಿದೆ.


ಈ ಚಲನಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಪ್ರಭು ಎಸ್.ಆರ್‌ ಸಂಗೀತ, ರಾಘವ ಸೂರ್ಯ ಹಾಗೂ ಸಯ್ಯದ್ ಇರ್ಫಾನ್ ಚಿತ್ರದ ನಾಯಕರಾಗಿ. ವಿನ್ಯಾ ಶೆಟ್ಟಿ, ಸ್ನೇಹ ರಾವ್, ಅಭಿ ಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್‌ ಮತ್ತಿತರರು ಉಳಿದ ತಾರಾಗಣದಲ್ಲಿದ್ದಾರೆ.


ರಮ್ಮಿ ಆಟವು ರಾಜ್ಯಾದ್ಯಂತ ಪ್ರದರ್ಶನ ನೀಡಲಿ ಹಾಗೂ ಆನ್ ಲೈನ್ ಗೇಮ್ ಕುರಿತಂತೆ ಯುವ ಸಮೂಹಗಳಲ್ಲಿ ಬದಲಾವಣೆ ತರಲಿ, ಚಿತ್ರವು ಕುಟುಂಬ ಸಮೇತರಾಗಿ ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ ಇದಾಗಿದೆ ಎಂಬುದು ಶ್ರೀ ರಾಘವ ಸೂರ್ಯ ಅಭಿಮಾನಿಗಳ ಬಳಗ ಬೆಂಗಳೂರು ರವರ ಪ್ರಮುಖ ಆಶಯವಾಗಿದೆ.

Image Description

Post a Comment

0 Comments