ಕನ್ನಡ ಅಧ್ಯಾಪಕ ಪ್ರೊ ಡಿ ಎಮ್ ನಾಯ್ಕ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ: ಜನಪದ ಸಾಹಿತ್ಯದ ಅಳಿವು - ಉಳಿವು
ರಾಯಬಾಗ ತಾಲೂಕಿನ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ,ವಿಜ್ಞಾನ ಮತ್ತು ವಾಣಿಜ್ಯಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ದತ್ತು ಗ್ರಾಮವಾದ ಅಳಗವಾಡಿಯಲ್ಲಿ ಇಂದು ಸಾಯಂಕಾಲ 4 ಗಂಟೆಗೆ ಪ್ರೊ ಡಿ ಎಮ್ ನಾಯ್ಕ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಜಾನಪದ ಸಾಹಿತ್ಯದ ಅಳಿವು - ಉಳಿವು ಎಂಬ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಎಸ್ ಎಮ್ ಯಲಿಗಾರ ಅವರು ವಹಿಸಲಿದ್ದಾರೆ. ಶ್ರೀಮತಿ ಆರ್ ಬಿ ಮ್ಯಾಗೇರಿ, ಪ್ರೊ ಕೆ ಎಸ್ ಹಾರೂಗೇರಿ ಉಪಸ್ಥಿತರಿರುವರು , ಕಾರ್ಯಕ್ರಮ ನಿರ್ವಹಣೆಯನ್ನು ಕು.ತೇಜಸ್ವಿನಿ ಎಮ್ ಕಟ್ಟಿಮನಿ ನಿರ್ವಹಿಸಲಿದ್ದಾರೆಂದು ಎನ್ ಎಸ್ ಎಸ್ ಶಿಬಿರಾಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ ಮತ್ತು ಸಹ ಶಿಬಿರಾಧಿಕಾರಿಗಳಾದ ಡಾ. ವಿಲಾಸ ಕಾಂಬಳೆ ಪತ್ರಿಕಾ ಪ್ರಕಠಣೆಯಲ್ಲಿ ತಿಳಿಸಿದ್ದಾರೆ.
ವರದಿ : ಬಸವೇಶ್ವರಿ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments